Blog
Your blog category
ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯ
ಜಲಮಾರ್ಗ, ವಾಯುಮಾರ್ಗ ಮತ್ತು ರೈಲುಮಾರ್ಗ ಹೊಂದಿರುವ ರಾಜ್ಯದ ಏಕೈಕ ನಗರವಾಗಿರುವ ಮಂಗಳೂರು ಇಂದು ಆಧುನಿಕ ಸ್ಪರ್ಶ ಪಡೆಯಲು ಪ್ರಮುಖ ಕಾರಣ, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್ ಸಿಟಿಯ ಯೋಜನೆಗಳ ಕನಸಿನಂತೆ, ಅಂದು ಅಭಿವೃದ್ಧಿಯ ಆರಂಭಿಕ ಹೆಜ್ಜೆಗಳನ್ನು ಇಡಲು ಕಾರಣವಾದವರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದರಾಗಿ ಗೆಲ್ಲುವ ಮೂಲಕ, ಸತತ 18 ವರ್ಷಗಳ ಕಾಲ ಕೆನರಾ ಭಾಗದ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಉಳ್ಳಾಲ ಶ್ರೀನಿವಾಸ ಮಲ್ಯ. ಆಧುನಿಕ
ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?
‘ಅತಿ ಶಂಕಸ್ಯ ನಿವಾರಣಂ ರೋಗಸ್ಯ ಉಪಚಾರಸ್ಯ ಶ್ರೇಯಃ’ ಎಂದು ಸಂಸ್ಕೃತದಲ್ಲಿ ಮತ್ತು ಇಂಗ್ಲೀ ಷಿನ ‘ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂದು ಗಾದೆಮಾತುಗಳು ಬಳಕೆಯಲ್ಲಿವೆ. ಇದು ವೈದ್ಯಲೋಕದಲ್ಲಿ ಅತಿಹೆಚ್ಚು ಬಳಸಲ್ಪಡುವ ಹೇಳಿಕೆಯೂ ಹೌದು! ಪ್ರಾರಂಭಿಕ ಹಂತದಲ್ಲಿ ಮನುಷ್ಯನ ಜೀವಿತಾವಧಿ ಸರಾಸರಿ 80-90ರ ಆಚೀಚೆ ಇತ್ತು. ಇಂದು ನವಯುವಕರೇ ಹೆಚ್ಚಾಗಿ ಸಾವಿಗೀಡಾಗುತ್ತಿರುವುದು ಆಹಾರ ಸೇವನಾ ಪದ್ಧತಿಯ ಜತೆಗೆ, ಬದಲಾದ ಜೀವನಶೈಲಿಯಿಂದಾಗಿ ಕಾಯಿಲೆ, ಬದುಕಿನೊತ್ತಡ, ಅಲ್ಪಾಯುಷ್ಯದ ಕಡೆಗೆ ಸಾಗುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ. ಬಿಪಿ ಎಂಬುದು ಕೇವಲ ಒಂದು ಊಹಾತ್ಮಕ
ಪಂಚಾಯತ್ ವ್ಯವಸ್ಥೆಗೆ ಶಕ್ತಿ ತುಂಬಿದ ಹಣಕಾಸು ಆಯೋಗ
ಭಾರತದ ಹಣಕಾಸು ಆಯೋಗವು ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಸಂಪನ್ಮೂಲಗಳ ವಿತರಣೆಯನ್ನು ನಿರ್ಧರಿಸುವ ಜವಾಬ್ದಾರಿಯುತ ಸಾಂವಿಧಾನಿಕ ಸಂಸ್ಥೆಯಾಗಿದೆ. 2019ರ ನವೆಂಬರ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಿಸಿದ 17ನೇ ಹಣಕಾಸು ಆಯೋಗವು ದೇಶದ ಆರ್ಥಿಕ ಆರೋಗ್ಯವನ್ನು ನಿರ್ಣಯಿ ಸುವ ಮತ್ತು ಫೆಡರಲ್ ಆಡಳಿತವನ್ನು ಬೆಂಬಲಿಸಲು ಸಂಪನ್ಮೂಲಗಳ ಸಮಾನ ವಿತರಣೆ ಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಹೊಂದಿದೆ. ಹಣಕಾಸು ಆಯೋಗವು ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳಿಂದ ರಚಿಸಲ್ಪಟ್ಟ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ಇದು ಪ್ರತಿ 5ನೇ
ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ
ಸೇನಾ ಹಿನ್ನೆಲೆ, ಹಿಂದೂ ಧರ್ಮದ ಅನುಯಾಯಿ, ಭಗವದ್ಗೀತೆಯಿಂದ ಸದಾ ಪ್ರೇರಣೆ ಹೊಂದುತ್ತ, ಚಿಕ್ಕ ವಯಸ್ಸಿನಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಅಪ್ರತಿಮ ಸಾಧಕಿ, ಪ್ರಸ್ತುತ ವಿಶ್ವದಲ್ಲಿಯೇ ಬಹುಸೂಕ್ಷ್ಮ ಪದವಿಯೊಂದರ ಮುಖ್ಯಸ್ಥೆಯಾಗಿ ಚುಕ್ಕಾಣಿ ಹಿಡಿದಿದ್ದಾರೆ! ಹೌದು, ನಾನು ಅಮೆರಿಕದ ಸೇನೆ ಸೇರುವಾಗ ಯಾರೂ ನೀನು ಯಾವ ಧರ್ಮದವಳು ಎಂದು ಕೇಳಲಿಲ್ಲ. ಈಗ, ನನ್ನ ಹೆಮ್ಮೆಯ ಜನರನ್ನು ಪ್ರತಿನಿಧಿಸುತ್ತಿದ್ದೇನೆ. ಈಗ ಅದೇಕೆ ಅಳತೆಗೋಲಾಗಬೇಕು? ಎಂದು ದಿಟ್ಟವಾಗಿ ಪ್ರಶ್ನಿಸಿದ್ದಳು ತುಳಸಿ. ಯಾಕೆಂದರೆ, ಈಕೆ ಹಿಂದೂ – ಸನಾತನ ಧರ್ಮ ಅನುಸರಿಸುತ್ತಿದ್ದಳು. ಹೌದು, ತಂದೆ
ಕರಾವಳಿ ಸಮಸ್ಯೆ ತಿಳಿಯದ ಅಧಿಕಾರಿಗಳಿಂದ ಜನ ಹೈರಾಣು !
ರಾಜ್ಯದಲ್ಲಿ ಇಪ್ಪತ್ತೊಂದು ಲಕ್ಷ ಸ್ವತ್ತುಗಳು ಅಧಿಕೃತ ಖಾತೆ ಹೊಂದಿದ್ದರೆ, 32 ಲಕ್ಷಕ್ಕೂ ಹೆಚ್ಚು ಅನಧಿಕೃತ ಸ್ವತ್ತುಗಳು ಅಧಿಕೃತ ಖಾತೆಗಳಾಗಲು ಕಾದುಕುಳಿತಿವೆ. ಹೀಗೆ ಅಳಿದುಳಿದಿರುವ ಎಲ್ಲ ಸ್ವತ್ತುಗಳಿಗೆ ಅಧಿಕೃತ ನೋಂದಣಿ ಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರ ಘೋಷಿಸಿರುವುದು, ಬಜೆಟ್ ಪೂರ್ವ ಮತ್ತು ನಿಗದಿತ ಅವಧಿಯೊಳಗೆ ಕಂದಾಯ ಸೇರಿ ವಿವಿಧ ಮೂಲಗಳಿಂದ ಆದಾಯ ಹೊಂದಿಸಲು ಮಾಡುತ್ತಿರುವ (ಒಳಿತೋ, ಕೆಡುಕೋ ತಿಳಿಯದಂತಹ ಭವಿಷ್ಯತ್ತಿನ ಪ್ರಶ್ನೆ ಇದರಲ್ಲಿದೆ!) ಮತ್ತೊಂದು ಬಗೆಯ ‘ಯೋಜನೆ’ ಇದಾಗಿದೆ. ಇದರಿಂದ ಸುಮಾರು 4 ಸಾವಿರ ಕೋಟಿಯಷ್ಟು ಆದಾಯ
ಮಂಡಳಿಯ ಚಿತ್ತ ಕೊಳಗೇರಿ ನಿರ್ಮೂಲನೆಯೋ, ಅಭಿವೃದ್ದಿಯೋ ?
ಹತ್ತಾರು ದಶಕಗಳು ಕಳೆದರೂ, ಕೊಳಗೇರಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವ ಮಾಹಿತಿ ಕೊಡುವುದು ಮಂಡಳಿಯ ಕೆಲಸವೆಂಬಂತೆ ಕಾಣಬರುತ್ತಿದೆ. ರಾಜ್ಯಾದ್ಯಂತ ಮಂಡಳಿಯ ಕ್ರಿಯಾಯೋಜನೆಯಾಗಲಿ, ತ್ವರಿತಗತಿಯ ಬದಲಾವಣೆಯ ಅಭಿವೃದ್ಧಿಗಳಾಗಲಿ ಎಲ್ಲಿಯೂ ಕಂಡುಬಾರದಿರುವುದರಿಂದ, ಜನಸಾಮಾನ್ಯರು ಈ ಮಂಡಳಿಯ ನಾಮಫಲಕದಲ್ಲಿರುವಂತೆ, ಇದು ಕೊಳಗೇರಿಯನ್ನು ನಿರ್ಮೂಲನೆಗೊಳಿಸುವುದಕ್ಕೆ ಇರುವುದೋ ಅಥವಾ ಕೊಳಗೇರಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೋ ಎಂದು ಅನುಮಾನ ವ್ಯಕ್ತಪಡಿಸುವ ಕಾಲ ಬಂದಿದೆ. ಸ್ಲಂ ಎನ್ನುವ ಕಲ್ಪನೆ ಮೊದಲು ಆರಂಭವಾಗಿದ್ದು ಲಂಡನ್ ನಗರದಲ್ಲಿ! ಹೌದು, ಇಡೀ ಜಗತ್ತಿನಲ್ಲಿ ನಾವೇ ಶ್ರೇಷ್ಠರು, ಇತರರನ್ನು ಆಳಲು ಹುಟ್ಟಿಕೊಂಡವರು, ನಾವು ಬಿಳಿಯರು,
ಗ್ಯಾರಂಟಿ ಭರಾಟೆಯಲ್ಲಿ ಗ್ರಾಮಾಡಳಿತ ಮರೆತ ಸರಕಾರ
ಯಾವುದೇ ಸರಕಾರವಾಗಿರಲಿ ತಳಹಂತದಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ನಡೆಯುತ್ತಿದೆ ಮತ್ತು ಸರಕಾರದ ಯೋಜನೆ ಸಾರ್ವಜನಿಕರ ಆಶೋತ್ತರಗಳಿಗೆ ತಳಮಟ್ಟದ ಅಧಿಕಾರಿಗಳ ಸ್ಪಂದನೆ ಹೇಗಿರಲಿದೆ ಎಂಬುದನ್ನು ಸ್ಪಷ್ಟವಾಗಿ ಅರಿತು ಅದರಂತೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಕೆಲಸವನ್ನು ಸರಕಾರ ಮಾಡಲೇಬೇಕಾಗುತ್ತದೆ. ಇಲ್ಲವಾದರೆ ಗ್ರಾಮ ಲೆಕ್ಕಿಗರು/ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ಎದುರಾಗಿರುವ ಸಮಸ್ಯೆ ಇಷ್ಟು ತೀವ್ರವಾಗುತ್ತಿರಲಿಲ್ಲ. ಕನಿಷ್ಠ ಸೌಲಭ್ಯವು ಇಲ್ಲದೆ ಕೆಳಹಂತದ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಅತಿಕಷ್ಟ. ಯೋಜನೆಗೆ, ಉಚಿತ ಘೋಷಣೆಗಳ ಅನುಷ್ಠಾನಕ್ಕಾದರೂ
ಗುರುತ್ವಾಕರ್ಷಣೆಯೂ, ಕುಂಭಮೇಳವೂ ಮತ್ತು ಆಧುನಿಕ ವಿಜ್ಞಾನ !
ಒಂದಾನೊಂದು ಕಾಲದಲ್ಲಿ ಇಡೀ ಜಗತ್ತಿಗೆ ಜ್ಞಾನದ ದೀವಿಗೆಯನ್ನು ಹಂಚಿದ್ದು ನಮ್ಮ ಭಾರತ ದೇಶ. ಹೌದು, ಇಂದು ನಾವೆಲ್ಲ ಭಾರತ ದೇಶದಲ್ಲಿ ನಮ್ಮ ಹಿಂದಿನ ಹಿರಿಮೆ-ಗರಿಮೆಯನ್ನು ಮರೆತು ಬದುಕುತ್ತಿದ್ದೇವೆ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಆಧುನಿಕ ಬದುಕಿನ ಯಾವುದೋ ಧಾವಂತದಲ್ಲಿ ಓಡುತ್ತಿದ್ದೇವೆ ಮತ್ತು ಧಾರ್ಮಿಕತೆ, ಗೃಹಕೃತ್ಯ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ತಂದೆತಾಯಿಗಳಾಗಿ ನಾವು ಸೋಲುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಇತರೆ ಜನರು ತಮ್ಮ ಧರ್ಮದ ಆಚರಣೆಗಳನ್ನು ನಿರಂತರಗೊಳಿಸುತ್ತ ಸಾಗುತ್ತಿದ್ದರು. ಜನವರಿ 2010ರಲ್ಲಿ ಇರಾಕ್ನ ಕರ್ಬಾಲಾದಲ್ಲಿ ಸುಮಾರು 1 ಕೋಟಿಯಷ್ಟು ಜನರು
ಕರ್ಮಣ್ಯೇವಾಧಿಕಾರಸ್ತೇ ಮತ್ತು ಮಾಡಿದ್ದುಣ್ಣೋ ಮಹರಾಯ !
ಮೊನ್ನೆಯಷ್ಟೇ ಹಣಕಾಸು ಸಚಿವ ಮಂಡಿಸಿದ ಸತತ 8ನೇ ದಾಖಲೆಯ ಬಜೆಟ್ ಮಧ್ಯಮ ವರ್ಗ ದವರಿಗೆ ಲಕ್ಷ್ಮೀಕಟಾಕ್ಷ ದೊರಕಿದಷ್ಟೇ ಸಂತಸವಾಯಿತೆಂದು ಎಲ್ಲ ಪತ್ರಿಕೆಗಳಲ್ಲಿ ದಾಖಲಾಯಿತು! ನರೇಂದ್ರ ಮೋದಿ ಸರಕಾರ , ಆರ್ಥಿಕವಾಗಿ ಎಷ್ಟೇ ಹೊರೆ ಬಿದ್ದರೂ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರಲಾರದು ಎಂಬುದನ್ನು ಮಾಧ್ಯಮ ಸೇರಿದಂತೆ ಜನಸಾಮಾನ್ಯರೂ ಹೊಗಳಿ ದರು. ಇಂತಹ ಒಂದು ವ್ಯಕ್ತಿತ್ವವುಳ್ಳ ಮೋದಿಯವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಬಂದ ಕೂಡ ಲೇ ಮುಂದೊಂದು ದಿನ ಪ್ರಧಾನಮಂತ್ರಿ ಅರ್ಹತೆಯ ಅಭ್ಯರ್ಥಿ ಎಂದು ಗುರುತಿಸಿದ ಒಂದು ವಿಶಿಷ್ಟ ಗುಂಪು, ಹೇಗಾದರೂ
ಆಡಳಿತದಲ್ಲಿ ಪಾರದರ್ಶಕತೆಯೇ ಗುಡ್ ಗವರ್ನೆನ್ಸ್
ಅಧಿಕಾರಕ್ಕೆ ಬಂದ ನಂತರದಲ್ಲಿ ಕೆಲವು ಅನುಷ್ಠಾನಕ್ಕೆ ಬಂದರೆ ಹಲವು ಪ್ರಣಾಳಿಕೆಯ ಉಳಿದು ಬಿಡು ತ್ತವೆ. ಪುನಃ ಅದು ನೆನಪಾಗುವುದು ಮುಂದಿನ ಚುನಾವಣೆಯ. ಇದೊಂದು ರೀತಿಯ ಕಾಮನ್ ಸೈಕಲ್ ಎಂಬಂತೆ ರಾಜಕೀಯ ವ್ಯವಸ್ಥೆಯಲ್ಲಿ ಸಾಗುತ್ತಿದೆ. ಚುನಾವಣಾಪೂರ್ವ ಘೋಷಣೆಗಳ ನಡುವೆಯೂ ಅಧಿಕಾರ ಹಿಡಿದ ಪಕ್ಷ ಸಾರ್ವಜನಿಕ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುತ್ತಾ ಉತ್ತಮ ಆಡಳಿತ (Good Governance) ನೀಡುವುದು ಅಷ್ಟೇ ಮುಖ್ಯ. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ರಹಿತವಾದ ವ್ಯವಸ್ಥೆ ನಿರ್ಮಾಣ ಮಾಡುವುದು ಗುಡ್ ಗವರ್ನೆನ್ಸ್. ಹಿಂದೆಲ್ಲ ಯಾವುದೇ ಸರಕಾರ