Blog
Your blog category
ಕರಾವಳಿಯ ಬೇಲೂರು-ಬೈಂದೂರಿನ ಸೇನೇಶ್ವರ ದೇಗುಲ !
ಕರಾವಳಿ ಪ್ರದೇಶದ ದೇವಾಲಯಗಳು ಸಾಮಾನ್ಯವಾಗಿ 8ನೇ ಶತಮಾನದಿಂದ 16ನೇ ಶತಮಾನ ಗಳವರೆಗೆ ನಿರ್ಮಾಣ ವಿಧಾನ ಹಾಗೂ ವಾಸ್ತುಶಿಲ್ಪ ಶಾಸ್ತ್ರೀಯ ಅಂಶಗಳನ್ನು ಹೊಂದಿವೆ. ಇಲ್ಲಿನ ದೇವಾಲಯಗಳ ಸ್ಥಾಪನೆಯು ಪ್ರಾಚೀನದಿಂದ ವಿಜಯನಗರ ಹಾಗೂ ನಂತರದ ಕಾಲಘಟ್ಟದವರೆಗೆ ವ್ಯಾಪಿಸಿರುವುದು ಕಂಡುಬರುತ್ತದೆ. ಕೊರೋನ ಕಾಲಘಟ್ಟವನ್ನು ದಾಟಿದ ಮೇಲೆ, ಪ್ರಪಂಚದಾದ್ಯಂತ ಪ್ರವಾಸೋದ್ಯಮ ಹೆಚ್ಚು ಗರಿಗೆದರಿತು. ತೀರ್ಥಯಾತ್ರೆ ಎಂಬುದು ನಮ್ಮ ಜನರ ಜೀವನದ ಒಂದು ಸಹಜ ಭಾಗವೇ ಆಗಿದೆ. ದೇಶದಲ್ಲಿ ಇದು ಇನ್ನೂ ಹೆಚ್ಚು ಬೆಳೆಯತೊಡಗಿದಾಗ, ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹಾಗೂ ಆಯಾ ಜಿ ಹಾಗೂ ತಾಲ್ಲೂಕು
ಬೆನ್ನುಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದ ವಿನಾಯಕ ರಾವ್
ಬಹುತೇಕ ಜೀವಿಗಳ ಬೆನ್ನುಮೂಳೆಯು ಭೂಮಿಗೆ ಸಮನಾಂತರವಾಗಿ ರಚನೆಯಾಗಿದೆ. ಬೆನ್ನು ಮೂಳೆಯ ವಿಷಯ ಬಂದಾಗ, ವಿನಾಯಕ ರಾವ್ ಅವರ ಬದುಕು ಆಶ್ಚರ್ಯ ಮತ್ತು ಪ್ರೇರಣಾದಾಯಕವಾದದ್ದು. ತಮಗೆ ಬಂದ ಅಪಾಯವನ್ನು ಮೆಟ್ಟಿ ನಿಂತು, ಬದುಕಿ ತೋರಿಸಿ ಇನ್ನೊಬ್ಬರ ಬದುಕಿಗೆ ಆಧಾರವಾಗುತ್ತಿದ್ದಾರೆ. ಉಡುಪಿ ಜಿಲ್ಲೆ ಕನ್ಯಾಡಿಯ ವಿನಾಯಕ ರಾವ್ ಅವರು ಸ್ವತಃ ಬೆನ್ನುಮೂಳೆ ಮುರಿತದ ದೈಹಿಕ ಸಂಕಷ್ಟಗಳ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಬೇರೆಯವರು ಇಂತಹ ಸಮಸ್ಯೆಗಳಿಂದ ತೊದರೆ ಅನುಭವಿಸಬಾರದೆಂದು ತಮ್ಮ ಸೇವಾಧಾಮ ಸಂಸ್ಥೆಯ ಮೂಲಕ ಕೈಲಾದ ಸೇವೆಯನ್ನು ಮಾಡುತ್ತ ಬರುತ್ತಿದ್ದಾರೆ. ವಿನಾಯಕರಾವ್ ಅವರ
ಸಮಾಜದಲ್ಲಿ ಬದಲಾಗುತ್ತಿದೆ ಉಳಿತಾಯದ ಪರಿಭಾಷೆ !
ಉಳಿತಾಯದ ಪರಿಭಾಷೆ ಬಗ್ಗೆ ಹೇಳುವುದಾದರೆ, ಯಾರು ಎಷ್ಟು ಉಳಿಸಬೇಕು? ತಿಂಗಳಿಗಾಗುವಷ್ಟಾ ಅಥವಾ ಮೂರು ತಲೆಮಾರುಗಳಿಗೆ ಆಗುವಷ್ಟಾ? ಎಂದೆಲ್ಲ ಪ್ರಶ್ನೆ ಬರುತ್ತದೆ. ಖಾಸಗಿ ಉಳಿತಾಯಗಳು ಸುರಕ್ಷಿತವಾ? ಸರಕಾರಿ ಉಳಿತಾಯ ಯೋಜನೆಗಳು ಕೈಹಿಡಿಯುತ್ತವಾ? ಎಂದೆಲ್ಲ ಅನುಮಾನಗಳಿರುತ್ತವೆ. ಭಾರತೀಯರು ಒಡವೆಗಳ ಮೂಲಕ ಚಿನ್ನ ಉಳಿಸುವುದರಲ್ಲಿ ಸಿದ್ಧಹಸ್ತರು. ಅವಕಾಶ, ಹೂಡಿಕೆಗಳ ವ್ಯಾಪ್ತಿ ಬದಲಾದಂತೆ ಷೇರು ಮಾರುಕಟ್ಟೆ, ಬಂಡವಾಳ ಹೂಡಿಕೆಗಳಂಥ ಹೆಚ್ಚುವರಿ ಇರುವ ಕ್ಷೇತ್ರ ಗಳಲ್ಲೂ ಇವರು ಪ್ರವೇಶಿಸುತ್ತಿರುವುದು ವೈಯಕ್ತಿಕ ಮತ್ತು ದೇಶದ ಆರ್ಥಿಕತೆಯ ವಿಚಾರದಲ್ಲಿ ಅಭಿವೃದ್ಧಿ ಸೂಚಕವಾಗಿದೆ. ಹಳ್ಳಿಗಳಿಂದ ನಗರ-ಪಟ್ಟಣಗಳವರೆಗೆ, ಬಡವರಿಂದ ಸಿರಿವಂತರವರೆಗೆ
ರಸಗೊಬ್ಬರರಹಿತ ಕೃಷಿಯೇ ಸಾವಯವ ಬದುಕಿನ ಆಶಾಕಿರಣ !
ದಶಕಗಳ ಹಿಂದೆ ಇಂಥ ಬೆಳೆಗಳಿಗೆ ಅನುಗುಣವಾಗಿ, ಮತ್ತದೇ ವಿದೇಶಿ ಕಂಪನಿಗಳ ಮೂಲಕ ವಿವಿಧ ಬಗೆಯ ರಾಸಾಯನಿಕಗಳನ್ನು ಸಿಂಪಡಿಸಲು ಆಗ್ರಹಿಸಲಾಗುತ್ತಿತ್ತು. ಇಂಥ ಪ್ರಕ್ರಿಯೆ ಸದ್ದಿಲ್ಲದೆ ಕನಿಷ್ಠ 30 ವರ್ಷ ನಡೆದರೂ ಸಾಕು, ಸ್ಥಳೀಯವಾಗಿ ಬೆಳೆಯುತ್ತಿದ್ದ ಮೂಲಬೆಳೆ ಸಂಪ್ರದಾಯವನ್ನು ಪೂರ್ತಿ ಬದಲಾಯಿಸಿಬಿಡಬಹುದು. ಮೊದಲೆಲ್ಲ ಊಟ ಯಾವುದಾದರೇನು, ಎಲ್ಲಿ ಮಾಡಿದರೇನು ಎಂಬಂತೆ ರುಚಿಕಟ್ಟಾಗಿರುತ್ತಿತ್ತು. ಹಿರಿಯರನ್ನು ಕೇಳಿದರೆ, ಕಳೆದುಹೋಗುತ್ತಿರುವ ನೈಸರ್ಗಿಕ ವಿಧಾನವಾಗಿದ್ದ ಸೌದೆಒಲೆ ಕಡೆಗೆ ಬೊಟ್ಟು ಮಾಡುತ್ತಾರೆ. ಇತ್ತೀಚೆಗೆ ಅಡುಗೆ ಮಾಡುವ ವಿಧಾನಗಳು, ಧವಸ-ಧಾನ್ಯಗಳಿಂದ ಹಿಡಿದು ನಿತ್ಯ ಅಡುಗೆಗೆ ಬಳಕೆಯಾಗುವ ಪದಾರ್ಥಗಳೇ ಬದಲಾಗಿಬಿಟ್ಟಿವೆ
ಜುಗಾರಿ ಮತ್ತು ಸಿನಿಮಾ ಜಗತ್ತಿನ ರಾಜಧಾನಿಗಳ ಜೊತೆಗೊಂದು ಸುತ್ತು
ಇಂಗ್ಲೆಂಡ್ನ ಪ್ರಥಮ ವಸಾಹತು ಜೇಮ್ಸ್ಟೌನ್, 1607ರಲ್ಲಿ ವರ್ಜಿನಿಯಾದಲ್ಲಿ ಸ್ಥಾಪನೆಯಾಯಿತು. ಮೆಸಾಚುಯೆಟ್ಸ್ನಲ್ಲಿ ಪಿಲ್ಗ್ರಿಮ್ಗಳು 1620ರಲ್ಲಿ ಪ್ಲೈಮೌತ್ ಕಾಲನಿ ಸ್ಥಾಪನೆ ಮಾಡಿದರು. ನಂತರ, ಕ್ಯಾನಡಾ ಮತ್ತು ಮಿಸ್ಸಿಸಿಪಿ ನದಿಯ ಇತರೆ ಭಾಗಗಳಲ್ಲಿ ಫ್ರೆಂಚ್ ವಲಸೆಗಳು, ಫ್ಲೋರಿಡಾ, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮುಂತಾದವುಗಳಲ್ಲಿ ಸ್ಪೇನಿಷ್ ವಲಸೆಗಳು ಆರಂಭಗೊಂಡವು. 1931ರಲ್ಲಿ ಜೂಜಾಟವನ್ನು ಕಾನೂನುಬದ್ಧಗೊಳಿಸಿದ ಮೇಲೆ, ವೇಗಾಸ್ನಲ್ಲಿ ಏನೇ ಮಾಡಿದರೂ ಹೊರ ಜಗತ್ತಿಗೆ ತಿಳಿಯದು, ಇಲ್ಲಿ ಎಲ್ಲವೂ ಸ್ವೀಕೃತವೆಂಬ ಚಟುವಟಿಕೆಗಳು ನಡೆಯತೊಡಗಿದವು. ದಿನದ 24 ಗಂಟೆಯೂ ಮದ್ಯಪಾನ, ನೈಟ್ಲೈಫ್, ಕೈಗೆಟಕುವ ಸ್ವೇಚ್ಛಾಚಾರದಿಂದ ಸಾಮಾಜಿಕ, ಧಾರ್ಮಿಕ ಮೌಲ್ಯಗಳಿಲ್ಲದ
ನವಭಾರತದ ಹೆದ್ದಾರಿಗಳಿಗೆ ಹೊಸ ಭಾಷ್ಯ ಬರೆದ ಎಕ್ಸ್ ಪ್ರೆಸ್ ವೇ ಪಿತಾಮಹ !
ಕರ್ನಾಟಕ, ಕೇರಳದ ರೈತರು ಬೆಳೆದ ಅನಾನಸ್ ಅಥವಾ ಇತರೆ ಬೆಳೆಗಳನ್ನು ದಕ್ಷಿಣಭಾಗದ ಹಳ್ಳಿಗಳಿಂದ ಉತ್ತರದ ದಿಲ್ಲಿಯವರೆಗೆ ಯೋಗ್ಯ ಬೆಲೆ ಇರುವಾಗ, ಸೂಕ್ತಸಮಯದಲ್ಲಿ ಸಮರ್ಪಕ ಸಾಗಾಣಿಕೆ ಮಾಡಬೇಕಿದ್ದರೆ, ಗ್ರಾಮೀಣ ರಸ್ತೆ, ನಗರ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ ವೇ ಗಳಿಂದ ಹಿಡಿದು, ಜಲಮಾರ್ಗಗಳಾದ ಬಂದರು, ವಾಯುಮಾರ್ಗಗಳು ಸರ್ವ ಋತು ಗಳಲ್ಲೂ ಸಾರಿಗೆಗೆ ಮುಕ್ತವಾಗಿರಬೇಕು. ಸಾಮಾನ್ಯವಾಗಿ, ಗಡ್ಕರಿಯವರನ್ನು ರೋಡ್ಕರಿ ಎಂದು ಕರೆಯುತ್ತಾರೆ. ಭಾರತದ ರಸ್ತೆಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿದವರು. ವಿಶ್ವಮಾನ್ಯತೆಯ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡವರು.
ಇಂಡಿಯನ್ ಮ್ಯಾನ್ ಎಂಬ ನಂಬಿಕೆ ಬೆಸೆಯುವ ಬಸ್ !
ಸ್ನೇಹತ್ವದ ಅತಿದೊಡ್ಡ ಪ್ರತೀಕವೆಂಬಂತೆ ಭಾರತವು QUAD (ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನ್) ರಾಷ್ಟ್ರಗಳೊಂದಿಗೆ ಸಮೀಪದ ಪ್ರದೇಶಗಳಲ್ಲಿ ಸಂಚಾರ ಮತ್ತು ಪರಿಕಲ್ಪನೆಗಳ ಕೇಂದ್ರ ಯೋಜನೆಗಳನ್ನು ರೂಪಿಸಲು ಮುಂದಾಳತ್ವ ವಹಿಸಿದೆ. ಇಷ್ಟೆಲ್ಲ ಸ್ನೇಹ, ನಂಬಿಕೆ, ಸಂಬಂಧಗಳ ಬೆಸುಗೆ ಬಯಸುತ್ತಿರುವ ಭಾರತದಿಂದ 50ರ ದಶಕದ ಜಗತ್ತಿನ ಒಂದು ಮಾದರಿ ಮಹಾನಂಬಿಕೆಯ ಮಾಹಾಯಾನದ ಬಸ್ ಆರಂಭಿಸಿತ್ತು ಎಂದರೆ ಸೋಜಿಗವೇ ಸರಿ! ಒಂದು ದೇಶ ತನ್ನ ಗಡಿಯ ಸುತ್ತ ತಂತಿಬೇಲಿ ಹಾಕಿ, ಗನ್ನು ಕೊಟ್ಟು ಸೈನಿಕರನ್ನು ನಿಯೋಜಿಸುವು ದೆಂದರೆ ದೇಶ ದೇಶಗಳ ನಡುವೆ ನಂಬಿಕೆ,
ಕುಶಲಾಧಾರಿತ ಉದ್ಯೋಗ ಸೃಷ್ಟಿಯತ್ತ ಇಂದಿನ ನವಭಾರತ
ಸ್ವಾತಂತ್ರಪೂರ್ವ ಕಾಲದ 1947ರ ಪರಿಸ್ಥಿತಿ ಗಮನಿಸಿದಾಗ, ಬಹುತೇಕ ಕೃಷಿ ಆಧಾರಿತ ಕ್ಷೇತ್ರದಲ್ಲಿ ಅಂದಿನ ಸಮಾಜ ತೊಡಗಿತ್ತು. ಅಸಂಘಟಿತ ವಲಯದ ಅತಿದೊಡ್ಡ ಕ್ಷೇತ್ರ ಕೃಷಿ ಕ್ಷೇತ್ರವಾಗಿತ್ತು. ಅಂದಿನ ಅಂಕಿ ಅಂಶಗಳನ್ನು ಅಂದಾಜು ಗಮನಿಸಿದಾಗ, ಒಟ್ಟು ದುಡಿಯುವ ವರ್ಗ 13 ಕೋಟಿಯಷ್ಟಿದ್ದು, ಕೃಷಿ ಉದ್ಯೋಗ ದಲ್ಲಿಯೇ ಶೇ.70ರಿಂದ 75ರಷ್ಟು ಪಾಲಿರುತ್ತಿತ್ತು. ಭಾರತ ಇಂದು ಜಾಗತಿಕವಾಗಿ ಕಾರ್ಮಿಕ ಶಕ್ತಿ ಕೇಂದ್ರವಾಗಿ ಮೂಡುತ್ತಿದೆ. ಹೆಚ್ಚುವರಿ ಆದಾಯ, ವೃತ್ತಿಪರ ತರಬೇತಿ, ಜಾಗತಿಕ ಬೇಡಿಕೆಗಳಿಂದ ಉದ್ಯೋಗ ವಲಸೆಯು ಹೆಚ್ಚು ವೇಗಗೊಳ್ಳುತ್ತಿದೆ. ಭಾರತದ ಯುವಜನಸಂಖ್ಯೆಯನ್ನು ಪೂರ್ಣ ಪ್ರಮಾಣದಲ್ಲಿ
ಹೊಟೇಲ್ ಉದ್ಯಮದ ಸವಾಲುಗಳು ಮತ್ತು ಭವಿಷ್ಯತ್ತು
ಕರಾವಳಿಯ ಖ್ಯಾತಿಯನ್ನು ವಿಶ್ವದೆಲ್ಲೆಡೆ ಎತ್ತಿ ಹಿಡಿದರು. ಇಂದಿನ ತಲೆಮಾರಿನವರು ಯಾಕೋ ಸ್ವಂತ ಹೊಟೇಲ್ ಮಾಡುವ ಸಾಹಸಕ್ಕೆ ಕೈಹಾಕದೆ, ಹೊಟೇಲ್ ಆಧಾರಿತ ಉದ್ಯೋಗ, ಬ್ಯುಜಿನೆಸ್ ಮ್ಯಾನೇಜ್ ಮೆಂಟ್ನಂತಹ ವೃತ್ತಿಪರತೆ ಕಡೆಗೆ ವಾಲುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಇದು ನನ್ನನ್ನು ಯೋಚಿಸುವಂತೆ ಮಾಡಿತು. ಸಬ್ಸಿಡಿ, ಮೂಲ ಬಂಡವಾಳ ಇಲ್ಲದೇ ಸ್ವಂತ ಪರಿಶ್ರಮ ಮಾತ್ರವೇ ನಂಬಿ ಹೊಟೇಲ್ ಕಟ್ಟಿದವರ ಕತೆಯಿದು. ದೇಶದ ಹೊಟೇಲ್ ಉದ್ಯಮಕ್ಕೆ ಕರಾವಳಿಗರು ಕೊಟ್ಟ ಕೊಡುಗೆ ಯನ್ನು ಇಂದಿನ ತಲೆಮಾರು ಮರೆತು, ಹೊಟೇಲ್ ಕ್ಷೇತ್ರದಿಂದ ವಿಮುಖವಾಗುತ್ತಿರುವುದು ಮಾತ್ರ ಉದ್ಯಮ
ಅಂಬೇಡ್ಕರ್ ಕೊಟ್ಟ ಸಂವಿಧಾನದ ಜೊತೆಗೆ ಇಂದಿರಾ ಕಾಂಗ್ರೆಸ್ ಚೆಲ್ಲಾಟ!
1947ರಿಂದ 1950ರ ವರೆಗೆ ಸಂವಿಧಾನವನ್ನು ರಚಿಸುವಾಗ, ಹೊಸ ಭಾರತೀಯ ರಾಜ್ಯಗಳ ಒಕ್ಕೂಟ ವು ಬ್ರಿಟಿಷ್ ಸಂಸತ್ತು ಜಾರಿಗೆ ತಂದಂತಹ ಅಸ್ತಿತ್ವದಲ್ಲಿರುವ ಶಾಸನದಿಂದ ನಿಯಂತ್ರಿಸಲ್ಪಡುತ್ತಿತ್ತು. ಸಂವಿಧಾನ ಸಭೆಯು ಸಂವಿಧಾನವನ್ನು ರಚಿಸಿತು, ಇದು ಮೂಲತಃ 389 ಸದಸ್ಯರನ್ನು ಒಳ ಗೊಂಡಿದ್ದ ಚುನಾಯಿತ ಶಾಸಕಾಂಗ ಸಂಸ್ಥೆಯಾಗಿತ್ತು. ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ, ಭಾರತೀಯ ನಾಯಕರ ಮುಂದೆ ಹೊಸ ಸವಾಲು ಎದುರಾ ಗಿತ್ತು. ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ತತ್ವಗಳ ಆಧಾರದ ಮೇಲೆ ಪ್ರಜಾಪ್ರಭುತ್ವ ಸ್ಥಾಪಿಸುವುದರ ಜೊತೆಗೆ, ಭಾರತ ಸ್ವತಂತ್ರ ರಾಷ್ಟ್ರವಾಗಿ
