Blog
Your blog category
ರಸಗೊಬ್ಬರರಹಿತ ಕೃಷಿಯೇ ಸಾವಯವ ಬದುಕಿನ ಆಶಾಕಿರಣ !
ದಶಕಗಳ ಹಿಂದೆ ಇಂಥ ಬೆಳೆಗಳಿಗೆ ಅನುಗುಣವಾಗಿ, ಮತ್ತದೇ ವಿದೇಶಿ ಕಂಪನಿಗಳ ಮೂಲಕ ವಿವಿಧ ಬಗೆಯ ರಾಸಾಯನಿಕಗಳನ್ನು ಸಿಂಪಡಿಸಲು ಆಗ್ರಹಿಸಲಾಗುತ್ತಿತ್ತು. ಇಂಥ ಪ್ರಕ್ರಿಯೆ ಸದ್ದಿಲ್ಲದೆ ಕನಿಷ್ಠ 30 ವರ್ಷ ನಡೆದರೂ ಸಾಕು, ಸ್ಥಳೀಯವಾಗಿ ಬೆಳೆಯುತ್ತಿದ್ದ ಮೂಲಬೆಳೆ ಸಂಪ್ರದಾಯವನ್ನು ಪೂರ್ತಿ ಬದಲಾಯಿಸಿಬಿಡಬಹುದು. ಮೊದಲೆಲ್ಲ ಊಟ ಯಾವುದಾದರೇನು, ಎಲ್ಲಿ ಮಾಡಿದರೇನು ಎಂಬಂತೆ ರುಚಿಕಟ್ಟಾಗಿರುತ್ತಿತ್ತು. ಹಿರಿಯರನ್ನು ಕೇಳಿದರೆ, ಕಳೆದುಹೋಗುತ್ತಿರುವ ನೈಸರ್ಗಿಕ ವಿಧಾನವಾಗಿದ್ದ ಸೌದೆಒಲೆ ಕಡೆಗೆ ಬೊಟ್ಟು ಮಾಡುತ್ತಾರೆ. ಇತ್ತೀಚೆಗೆ ಅಡುಗೆ ಮಾಡುವ ವಿಧಾನಗಳು, ಧವಸ-ಧಾನ್ಯಗಳಿಂದ ಹಿಡಿದು ನಿತ್ಯ ಅಡುಗೆಗೆ ಬಳಕೆಯಾಗುವ ಪದಾರ್ಥಗಳೇ ಬದಲಾಗಿಬಿಟ್ಟಿವೆ
ಜುಗಾರಿ ಮತ್ತು ಸಿನಿಮಾ ಜಗತ್ತಿನ ರಾಜಧಾನಿಗಳ ಜೊತೆಗೊಂದು ಸುತ್ತು
ಇಂಗ್ಲೆಂಡ್ನ ಪ್ರಥಮ ವಸಾಹತು ಜೇಮ್ಸ್ಟೌನ್, 1607ರಲ್ಲಿ ವರ್ಜಿನಿಯಾದಲ್ಲಿ ಸ್ಥಾಪನೆಯಾಯಿತು. ಮೆಸಾಚುಯೆಟ್ಸ್ನಲ್ಲಿ ಪಿಲ್ಗ್ರಿಮ್ಗಳು 1620ರಲ್ಲಿ ಪ್ಲೈಮೌತ್ ಕಾಲನಿ ಸ್ಥಾಪನೆ ಮಾಡಿದರು. ನಂತರ, ಕ್ಯಾನಡಾ ಮತ್ತು ಮಿಸ್ಸಿಸಿಪಿ ನದಿಯ ಇತರೆ ಭಾಗಗಳಲ್ಲಿ ಫ್ರೆಂಚ್ ವಲಸೆಗಳು, ಫ್ಲೋರಿಡಾ, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮುಂತಾದವುಗಳಲ್ಲಿ ಸ್ಪೇನಿಷ್ ವಲಸೆಗಳು ಆರಂಭಗೊಂಡವು. 1931ರಲ್ಲಿ ಜೂಜಾಟವನ್ನು ಕಾನೂನುಬದ್ಧಗೊಳಿಸಿದ ಮೇಲೆ, ವೇಗಾಸ್ನಲ್ಲಿ ಏನೇ ಮಾಡಿದರೂ ಹೊರ ಜಗತ್ತಿಗೆ ತಿಳಿಯದು, ಇಲ್ಲಿ ಎಲ್ಲವೂ ಸ್ವೀಕೃತವೆಂಬ ಚಟುವಟಿಕೆಗಳು ನಡೆಯತೊಡಗಿದವು. ದಿನದ 24 ಗಂಟೆಯೂ ಮದ್ಯಪಾನ, ನೈಟ್ಲೈಫ್, ಕೈಗೆಟಕುವ ಸ್ವೇಚ್ಛಾಚಾರದಿಂದ ಸಾಮಾಜಿಕ, ಧಾರ್ಮಿಕ ಮೌಲ್ಯಗಳಿಲ್ಲದ
ನವಭಾರತದ ಹೆದ್ದಾರಿಗಳಿಗೆ ಹೊಸ ಭಾಷ್ಯ ಬರೆದ ಎಕ್ಸ್ ಪ್ರೆಸ್ ವೇ ಪಿತಾಮಹ !
ಕರ್ನಾಟಕ, ಕೇರಳದ ರೈತರು ಬೆಳೆದ ಅನಾನಸ್ ಅಥವಾ ಇತರೆ ಬೆಳೆಗಳನ್ನು ದಕ್ಷಿಣಭಾಗದ ಹಳ್ಳಿಗಳಿಂದ ಉತ್ತರದ ದಿಲ್ಲಿಯವರೆಗೆ ಯೋಗ್ಯ ಬೆಲೆ ಇರುವಾಗ, ಸೂಕ್ತಸಮಯದಲ್ಲಿ ಸಮರ್ಪಕ ಸಾಗಾಣಿಕೆ ಮಾಡಬೇಕಿದ್ದರೆ, ಗ್ರಾಮೀಣ ರಸ್ತೆ, ನಗರ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ ವೇ ಗಳಿಂದ ಹಿಡಿದು, ಜಲಮಾರ್ಗಗಳಾದ ಬಂದರು, ವಾಯುಮಾರ್ಗಗಳು ಸರ್ವ ಋತು ಗಳಲ್ಲೂ ಸಾರಿಗೆಗೆ ಮುಕ್ತವಾಗಿರಬೇಕು. ಸಾಮಾನ್ಯವಾಗಿ, ಗಡ್ಕರಿಯವರನ್ನು ರೋಡ್ಕರಿ ಎಂದು ಕರೆಯುತ್ತಾರೆ. ಭಾರತದ ರಸ್ತೆಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿದವರು. ವಿಶ್ವಮಾನ್ಯತೆಯ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡವರು.
ಇಂಡಿಯನ್ ಮ್ಯಾನ್ ಎಂಬ ನಂಬಿಕೆ ಬೆಸೆಯುವ ಬಸ್ !
ಸ್ನೇಹತ್ವದ ಅತಿದೊಡ್ಡ ಪ್ರತೀಕವೆಂಬಂತೆ ಭಾರತವು QUAD (ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನ್) ರಾಷ್ಟ್ರಗಳೊಂದಿಗೆ ಸಮೀಪದ ಪ್ರದೇಶಗಳಲ್ಲಿ ಸಂಚಾರ ಮತ್ತು ಪರಿಕಲ್ಪನೆಗಳ ಕೇಂದ್ರ ಯೋಜನೆಗಳನ್ನು ರೂಪಿಸಲು ಮುಂದಾಳತ್ವ ವಹಿಸಿದೆ. ಇಷ್ಟೆಲ್ಲ ಸ್ನೇಹ, ನಂಬಿಕೆ, ಸಂಬಂಧಗಳ ಬೆಸುಗೆ ಬಯಸುತ್ತಿರುವ ಭಾರತದಿಂದ 50ರ ದಶಕದ ಜಗತ್ತಿನ ಒಂದು ಮಾದರಿ ಮಹಾನಂಬಿಕೆಯ ಮಾಹಾಯಾನದ ಬಸ್ ಆರಂಭಿಸಿತ್ತು ಎಂದರೆ ಸೋಜಿಗವೇ ಸರಿ! ಒಂದು ದೇಶ ತನ್ನ ಗಡಿಯ ಸುತ್ತ ತಂತಿಬೇಲಿ ಹಾಕಿ, ಗನ್ನು ಕೊಟ್ಟು ಸೈನಿಕರನ್ನು ನಿಯೋಜಿಸುವು ದೆಂದರೆ ದೇಶ ದೇಶಗಳ ನಡುವೆ ನಂಬಿಕೆ,
ಕುಶಲಾಧಾರಿತ ಉದ್ಯೋಗ ಸೃಷ್ಟಿಯತ್ತ ಇಂದಿನ ನವಭಾರತ
ಸ್ವಾತಂತ್ರಪೂರ್ವ ಕಾಲದ 1947ರ ಪರಿಸ್ಥಿತಿ ಗಮನಿಸಿದಾಗ, ಬಹುತೇಕ ಕೃಷಿ ಆಧಾರಿತ ಕ್ಷೇತ್ರದಲ್ಲಿ ಅಂದಿನ ಸಮಾಜ ತೊಡಗಿತ್ತು. ಅಸಂಘಟಿತ ವಲಯದ ಅತಿದೊಡ್ಡ ಕ್ಷೇತ್ರ ಕೃಷಿ ಕ್ಷೇತ್ರವಾಗಿತ್ತು. ಅಂದಿನ ಅಂಕಿ ಅಂಶಗಳನ್ನು ಅಂದಾಜು ಗಮನಿಸಿದಾಗ, ಒಟ್ಟು ದುಡಿಯುವ ವರ್ಗ 13 ಕೋಟಿಯಷ್ಟಿದ್ದು, ಕೃಷಿ ಉದ್ಯೋಗ ದಲ್ಲಿಯೇ ಶೇ.70ರಿಂದ 75ರಷ್ಟು ಪಾಲಿರುತ್ತಿತ್ತು. ಭಾರತ ಇಂದು ಜಾಗತಿಕವಾಗಿ ಕಾರ್ಮಿಕ ಶಕ್ತಿ ಕೇಂದ್ರವಾಗಿ ಮೂಡುತ್ತಿದೆ. ಹೆಚ್ಚುವರಿ ಆದಾಯ, ವೃತ್ತಿಪರ ತರಬೇತಿ, ಜಾಗತಿಕ ಬೇಡಿಕೆಗಳಿಂದ ಉದ್ಯೋಗ ವಲಸೆಯು ಹೆಚ್ಚು ವೇಗಗೊಳ್ಳುತ್ತಿದೆ. ಭಾರತದ ಯುವಜನಸಂಖ್ಯೆಯನ್ನು ಪೂರ್ಣ ಪ್ರಮಾಣದಲ್ಲಿ
ಹೊಟೇಲ್ ಉದ್ಯಮದ ಸವಾಲುಗಳು ಮತ್ತು ಭವಿಷ್ಯತ್ತು
ಕರಾವಳಿಯ ಖ್ಯಾತಿಯನ್ನು ವಿಶ್ವದೆಲ್ಲೆಡೆ ಎತ್ತಿ ಹಿಡಿದರು. ಇಂದಿನ ತಲೆಮಾರಿನವರು ಯಾಕೋ ಸ್ವಂತ ಹೊಟೇಲ್ ಮಾಡುವ ಸಾಹಸಕ್ಕೆ ಕೈಹಾಕದೆ, ಹೊಟೇಲ್ ಆಧಾರಿತ ಉದ್ಯೋಗ, ಬ್ಯುಜಿನೆಸ್ ಮ್ಯಾನೇಜ್ ಮೆಂಟ್ನಂತಹ ವೃತ್ತಿಪರತೆ ಕಡೆಗೆ ವಾಲುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಇದು ನನ್ನನ್ನು ಯೋಚಿಸುವಂತೆ ಮಾಡಿತು. ಸಬ್ಸಿಡಿ, ಮೂಲ ಬಂಡವಾಳ ಇಲ್ಲದೇ ಸ್ವಂತ ಪರಿಶ್ರಮ ಮಾತ್ರವೇ ನಂಬಿ ಹೊಟೇಲ್ ಕಟ್ಟಿದವರ ಕತೆಯಿದು. ದೇಶದ ಹೊಟೇಲ್ ಉದ್ಯಮಕ್ಕೆ ಕರಾವಳಿಗರು ಕೊಟ್ಟ ಕೊಡುಗೆ ಯನ್ನು ಇಂದಿನ ತಲೆಮಾರು ಮರೆತು, ಹೊಟೇಲ್ ಕ್ಷೇತ್ರದಿಂದ ವಿಮುಖವಾಗುತ್ತಿರುವುದು ಮಾತ್ರ ಉದ್ಯಮ
ಅಂಬೇಡ್ಕರ್ ಕೊಟ್ಟ ಸಂವಿಧಾನದ ಜೊತೆಗೆ ಇಂದಿರಾ ಕಾಂಗ್ರೆಸ್ ಚೆಲ್ಲಾಟ!
1947ರಿಂದ 1950ರ ವರೆಗೆ ಸಂವಿಧಾನವನ್ನು ರಚಿಸುವಾಗ, ಹೊಸ ಭಾರತೀಯ ರಾಜ್ಯಗಳ ಒಕ್ಕೂಟ ವು ಬ್ರಿಟಿಷ್ ಸಂಸತ್ತು ಜಾರಿಗೆ ತಂದಂತಹ ಅಸ್ತಿತ್ವದಲ್ಲಿರುವ ಶಾಸನದಿಂದ ನಿಯಂತ್ರಿಸಲ್ಪಡುತ್ತಿತ್ತು. ಸಂವಿಧಾನ ಸಭೆಯು ಸಂವಿಧಾನವನ್ನು ರಚಿಸಿತು, ಇದು ಮೂಲತಃ 389 ಸದಸ್ಯರನ್ನು ಒಳ ಗೊಂಡಿದ್ದ ಚುನಾಯಿತ ಶಾಸಕಾಂಗ ಸಂಸ್ಥೆಯಾಗಿತ್ತು. ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ, ಭಾರತೀಯ ನಾಯಕರ ಮುಂದೆ ಹೊಸ ಸವಾಲು ಎದುರಾ ಗಿತ್ತು. ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ತತ್ವಗಳ ಆಧಾರದ ಮೇಲೆ ಪ್ರಜಾಪ್ರಭುತ್ವ ಸ್ಥಾಪಿಸುವುದರ ಜೊತೆಗೆ, ಭಾರತ ಸ್ವತಂತ್ರ ರಾಷ್ಟ್ರವಾಗಿ
ಮಧುಕರಣ್ಣನ ಮಾತಿನಲ್ಲಿ ತುರ್ತುಪರಿಸ್ಥಿತಿಯ ಕರಾಳದಿನ !
ನಮ್ಮ ಕೆಲ ಹಿರಿಯರನ್ನು ಭೇಟಿ ಮಾಡಲು ನಾಯಕರುಗಳು ಊರಿಗೆ ಬರುತ್ತಿದ್ದುದರಿಂದ, ಅವರನ್ನು ಗುಪ್ತವಾಗಿ ಕರೆದುಕೊಂಡುಬರುವ ಮತ್ತು ಬೇರೊಂದು ಊರಿಗೆ ಸುರಕ್ಷಿತವಾಗಿ ಕಳುಹಿಸಿ ಕೊಡುವ ಹೊಣೆಯೂ ನನ್ನದಾಗಿತ್ತು. ಇದೆಲ್ಲವನ್ನು ಯಶಸ್ವಿಯಾಗಿ ಮಾಡುತ್ತಾ ಬರುತ್ತಿದ್ದೆ. ಇದೆಲ್ಲವೂ ಪೊಲೀಸಿನವರಿಗೆ ತಿಳಿಯಿತು. ನನ್ನ ಮೇಲೆ ತೀವ್ರ ನಿಗಾ ಇಡಲು ಶುರು ಮಾಡಿದರು. ನಾನು ಆಗ ಸಿಂಡಿಕೇಟ್ ಬ್ಯಾಂಕ್ನ ಉದ್ಯೋಗಿಯಾಗಿದ್ದೆ. ಆಫೀಸಿನಲ್ಲಿ, ನೆರೆಹೊರೆಯಲ್ಲಿ ಗುಸು ಗುಸು ಸುದ್ಧಿ ಹರಿದಾಡುತ್ತಿತ್ತು. ನ್ಯಾಯಾಲಯದ ತೀರ್ಪು ಇಂದಿರಾಗಾಂಧಿ ವಿರುದ್ಧ ಬಂದಿದ್ದರಿಂದ, ದೇಶದಲ್ಲಿ ಏನೋ ಒಂದು ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ
ಯೋಧನನ್ನೂ ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು !
ಭಾರತೀಯ ಸೈನಿಕರು ಈ ಭಾಗದಲ್ಲಿ ಆಪತ್ಕಾಲ ದಲ್ಲಿದ್ದಾಗ, ಬಾಬಾ ಅಲ್ಲಿಗೆ ಬಂದು ರಕ್ಷಿಸಿದ ಹಲವು ಪ್ರತ್ಯಕ್ಷ, ಅಪ್ರತ್ಯಕ್ಷ ಘಟನೆಗಳು ನಡೆದಿವೆ. ಈ ಘಟನೆಗಳು ಬಾಯಿಯಿಂದ ಬಾಯಿಗೆ ಹರಯ, ಸೇನೆಯು ಅವರು ಮರಣಾನಂತರವೂ ಗಡಿಯ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ನಂಬಿಕೆಗೆ ಕಾರಣವಾಯಿತು. ಬಾಬಾ ಅವರ ಪವಿತ್ರ ಆತ್ಮವು ನಮ್ಮ ಸೈನ್ಯಕ್ಕೆ ನೆರವಾಗುತ್ತಿದೆ ಎಂಬ ಭಾವಕ್ಕೆ ಧಾರ್ಮಿಕ ರೂಪ, ಗೌರವ ಕೊಟ್ಟು ಅವರ ಗೌರವಾರ್ಥ ಬಾಬಾ ಮಂದಿರ ದೇವಾಲಯವನ್ನು ಭಾರತೀಯ ಸೇನೆಯು ನಾಥುಲಾ ಪಾಸ್ ಹತ್ತಿರ ನಿರ್ಮಿಸಿತು. ನದಿಗಳೂ ಸಹ
ಸಿಕ್ಕಿಂಗೆ 50ರ ಸಂಭ್ರಮ: Act ಈಸ್ಟ್ ನಿಂದ Act ಫಾಸ್ಟ್ ನತ್ತ
ಪೂರ್ವ ಹಿಮಾಲಯಗಳ ಮಡಿಲಲ್ಲಿ ಅಲಂಕರಿಸಲ್ಪಟ್ಟಿರುವ ಸಿಕ್ಕಿಂ, ಭಾರತದಲ್ಲಿನ ಎರಡನೇ ಅತಿ ಸಣ್ಣ ಮತ್ತು ವೈವಿಧ್ಯಮಯ ಪರಿಸರ ಹೊಂದಿರುವ ರಾಜ್ಯ. ಅದ್ಭುತ ನೈಸರ್ಗಿಕ ಸೌಂದರ್ಯ, ಸಂಸ್ಕೃತಿಯ ವೈವಿಧ್ಯತೆ ಹಾಗೂ ಪ್ರಗತಿಪರ ನೀತಿಗಳಿಂದ ಸಿಕ್ಕಿಂ ದೇಶದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಪೂರ್ವ ಹಿಮಾಲಯದ ಮನಮೋಹಕ ಮೋಡಿಗಾರ ಈ ಸಿಕ್ಕಿಂ. ಭಾರತ-ಚೀನಾದ ನಡುವೆ ರಕ್ಷಣಾತ್ಮಕ ವಲಯವಾಗಿ ನಿಂತಿದ್ದು, 333 ವರ್ಷಗಳ ಕಾಲ ರಾಜರ ಆಡಳಿತದ ನಂತರ, ಜನಮತದ ಮೂಲಕ 1975ರಲ್ಲಿ 22ನೇ ರಾಜ್ಯವಾಗಿ ಭಾರತದೊಳಗೆ ವಿಲೀನಗೊಂಡಿತು. ಈ ಬೆಸುಗೆಗೆ
