ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಿ

ಇತ್ತೀಚೆಗಷ್ಟೇ ದೇಶಾದ್ಯಂತ ಗಾಂಧಿ ಜಯಂತಿ ವಿಜೃಂಭಣೆಯಿಂದ ನಡೆದಿದೆ. ಸತ್ಯ, ಅಹಿಂಸೆಗಳಷ್ಟೇ ಸ್ವಚ್ಛತೆಗೂ ಪ್ರಾಮುಖ್ಯ ಕೊಟ್ಟ ಗಾಂಧೀಜಿಯವರ ಆದರ್ಶವನ್ನು ಕೃತಿಮುಖೇನ ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೆ ತಂದಿದ್ದರು. ಮೊನ್ನೆಯೂ ಮಾನ್ಯ ಪ್ರಧಾನಿಗಳ ಅಪೇಕ್ಷೆಯಂತೆ ದೇಶಾದ್ಯಂತ ‘ಸ್ವಚ್ಛತೆಯೇ ಸೇವೆ’ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಪ್ರಧಾನಿಯವರ ಎಲ್ಲ ಕರೆಗಳನ್ನು ವಿರೋಧಿಸುವ ಅಥವಾ ನಿರ್ಲಕ್ಷಿಸುವ ಕಾಂಗ್ರೆಸಿಗರು ಮೊನ್ನೆ ಮಾತ್ರ ತಾವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗಾಂಧೀಜಿಯ ಹೆಸರನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ,

Read More

ಮಳೆಗಾಲದಲ್ಲೂ ಲೋಡ್ ಶೆಡ್ಡಿಂಗ್ ಪ್ರಾಬ್ಲಮ್!

ಕರ್ನಾಟಕ ರಾಜ್ಯ ಸರ್ಕಾರ ತನ್ನ ಬಿಟ್ಟಿ ಭಾಗ್ಯಗಳನ್ನ ಪೂರೈಸುವ ಆಲೋಚನೆಯಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಉತ್ತರಿಸದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ರಾಜ್ಯದ ಜನರ ದುರದೃಷ್ಟವೋ ಅಥವಾ ಕಾಕಥಾಳಿಯೋ ಗೊತ್ತಿಲ್ಲ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಜನ ಬರಗಾಲ ಅನುಭವಿಸಿದ್ದೇ ಹೆಚ್ಚು.ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು,ಉಷ್ಣತೆ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆ ಕುಂಟಿತವಾದ ಹಿನ್ನೆಲೆ ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ರೈತರಿಗೆ ಸಾಕಷ್ಟು

Read More

ಸನಾತನ ಧರ್ಮದ ಅಪಮಾನ, ಅವನತಿಗೆ ಆಹ್ವಾನ!

ನಮ್ಮದೇ ಮಣ್ಣಲ್ಲಿ ಹುಟ್ಟಿ ನಮ್ಮ ಸನಾತನ ಧರ್ಮದ ತಳಹದಿಯಲ್ಲಿ ಬೆಳೆದು ಕೊನೆಗೆ ತಮ್ಮ ಧರ್ಮದ ಬಗ್ಗೆಯೇ ಟೀಕೆ ಮಾಡುವ ಪ್ರಚಾರದ ತೆವಲು ಹಿಡಿದ ಸಾಕಷ್ಟು ಮಂದಿಗಳ ಗುಂಪು ನಮ್ಮ ದೇಶದಲ್ಲಿದೆ.ಈ ಗುಂಪಿಗೆ ಹೊಸದೊಂದು ಹೆಸರು ಸೇರ್ಪಡೆಯಾಗಿದ್ದು, ಆ ಹೆಸರೇ ತಮ್ಮ ಅಪ್ಪ ಹಾಗೂ ಅಜ್ಜನ ಹೆಸರಿನಿಂದ ಅಧಿಕಾರಕ್ಕೆ ಬಂದ ಉಪನಿಧಿ ಸ್ಟಾಲಿನ್. ಸನಾತನ ಧರ್ಮ ಒಂದು ಡೇಂಘೀ, ಮಲೇರಿಯಾ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ ಸನಾತನ ಧರ್ಮದ ಮೇಲೆ ನಿಂತಿರುವ

Read More