Blog
Your blog category
ರಾಷ್ಟ್ರೀಯ ಭದ್ರತೆಯೂ ರಾಜಕೀಯ ವಿಷಯವಾದಾಗ !
ಕಾಲಚಕ್ರ, ಎಲ್ಲವನ್ನೂ ಒರೆಗೆ ಹಚ್ಚುತ್ತದೆ. ಸತ್ಯ ಶಾಶ್ವತವಾಗಿದ್ದು, ಮುಚ್ಚಿಡಲು ಸಾಧ್ಯವಿಲ್ಲ ಎಂಬ ಮಾತಿನಂತೆ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪಿತೂರಿ ಪಾಕಿಸ್ತಾನಕ್ಕಿಂತ ಏನು ಕಡಿಮೆಯಿರಲಿಲ್ಲ! ಈಗ, ಇನ್ನೊಬ್ಬ ದಾಳಿಕೋರ ರಾಣಾ ಎಂಬಾತನನ್ನು ಅಮೆರಿಕಾದ ಜೈಲಿ ನಿಂದ ಹೆಡೆಮುರಿ ಕಟ್ಟಿ ಭಾರತಕ್ಕೆ ತರಲಾಗಿದೆ. ಮುಂಬೈ ದಾಳಿಯ ಸತ್ಯಗಳು ಇನ್ನಷ್ಟು ಹೊರಬರಲಿವೆ. ದೇಶದಲ್ಲೇ ಅತ್ಯಂತ ಸುಸಜ್ಜಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶೀಘ್ರ ಸಾರಿಗೆಗೆ ಮೋನೋ-ಮೆಟ್ರೋ ರೈಲು ಸೌಲಭ್ಯಗಳ ಜೊತೆಗೆ, ಅಂತರಾಷ್ಟ್ರೀಯ ಮಟ್ಟದ ಹೆಸರು, ಆರ್ಥಿಕತೆ, ಸೇನೆ, ವ್ಯಾಪಾರ,
ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯ
ಜಲಮಾರ್ಗ, ವಾಯುಮಾರ್ಗ ಮತ್ತು ರೈಲುಮಾರ್ಗ ಹೊಂದಿರುವ ರಾಜ್ಯದ ಏಕೈಕ ನಗರವಾಗಿರುವ ಮಂಗಳೂರು ಇಂದು ಆಧುನಿಕ ಸ್ಪರ್ಶ ಪಡೆಯಲು ಪ್ರಮುಖ ಕಾರಣ, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್ ಸಿಟಿಯ ಯೋಜನೆಗಳ ಕನಸಿನಂತೆ, ಅಂದು ಅಭಿವೃದ್ಧಿಯ ಆರಂಭಿಕ ಹೆಜ್ಜೆಗಳನ್ನು ಇಡಲು ಕಾರಣವಾದವರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದರಾಗಿ ಗೆಲ್ಲುವ ಮೂಲಕ, ಸತತ 18 ವರ್ಷಗಳ ಕಾಲ ಕೆನರಾ ಭಾಗದ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಉಳ್ಳಾಲ ಶ್ರೀನಿವಾಸ ಮಲ್ಯ. ಆಧುನಿಕ
ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?
‘ಅತಿ ಶಂಕಸ್ಯ ನಿವಾರಣಂ ರೋಗಸ್ಯ ಉಪಚಾರಸ್ಯ ಶ್ರೇಯಃ’ ಎಂದು ಸಂಸ್ಕೃತದಲ್ಲಿ ಮತ್ತು ಇಂಗ್ಲೀ ಷಿನ ‘ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂದು ಗಾದೆಮಾತುಗಳು ಬಳಕೆಯಲ್ಲಿವೆ. ಇದು ವೈದ್ಯಲೋಕದಲ್ಲಿ ಅತಿಹೆಚ್ಚು ಬಳಸಲ್ಪಡುವ ಹೇಳಿಕೆಯೂ ಹೌದು! ಪ್ರಾರಂಭಿಕ ಹಂತದಲ್ಲಿ ಮನುಷ್ಯನ ಜೀವಿತಾವಧಿ ಸರಾಸರಿ 80-90ರ ಆಚೀಚೆ ಇತ್ತು. ಇಂದು ನವಯುವಕರೇ ಹೆಚ್ಚಾಗಿ ಸಾವಿಗೀಡಾಗುತ್ತಿರುವುದು ಆಹಾರ ಸೇವನಾ ಪದ್ಧತಿಯ ಜತೆಗೆ, ಬದಲಾದ ಜೀವನಶೈಲಿಯಿಂದಾಗಿ ಕಾಯಿಲೆ, ಬದುಕಿನೊತ್ತಡ, ಅಲ್ಪಾಯುಷ್ಯದ ಕಡೆಗೆ ಸಾಗುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ. ಬಿಪಿ ಎಂಬುದು ಕೇವಲ ಒಂದು ಊಹಾತ್ಮಕ
ಪಂಚಾಯತ್ ವ್ಯವಸ್ಥೆಗೆ ಶಕ್ತಿ ತುಂಬಿದ ಹಣಕಾಸು ಆಯೋಗ
ಭಾರತದ ಹಣಕಾಸು ಆಯೋಗವು ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಸಂಪನ್ಮೂಲಗಳ ವಿತರಣೆಯನ್ನು ನಿರ್ಧರಿಸುವ ಜವಾಬ್ದಾರಿಯುತ ಸಾಂವಿಧಾನಿಕ ಸಂಸ್ಥೆಯಾಗಿದೆ. 2019ರ ನವೆಂಬರ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಿಸಿದ 17ನೇ ಹಣಕಾಸು ಆಯೋಗವು ದೇಶದ ಆರ್ಥಿಕ ಆರೋಗ್ಯವನ್ನು ನಿರ್ಣಯಿ ಸುವ ಮತ್ತು ಫೆಡರಲ್ ಆಡಳಿತವನ್ನು ಬೆಂಬಲಿಸಲು ಸಂಪನ್ಮೂಲಗಳ ಸಮಾನ ವಿತರಣೆ ಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಹೊಂದಿದೆ. ಹಣಕಾಸು ಆಯೋಗವು ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳಿಂದ ರಚಿಸಲ್ಪಟ್ಟ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ಇದು ಪ್ರತಿ 5ನೇ
ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ
ಒಂದು ಬೇಕರಿಯ ಮಾಲೀಕ ತಾನು ತಯಾರು ಮಾಡಿದ ತಿನಿಸುಗಳಿಗೆ ತಾನೇ ಬೆಲೆ ನಿಗದಿಪಡಿಸಿ, ಅದಕ್ಕೆ ಸಮನಾಗಿ ಯಾವ ಅಡೆತಡೆಯೂ ಇಲ್ಲದೆ, ಯಾವ ಚೌಕಾಸಿಗೂ ಅವಕಾಶವಿಲ್ಲದಂತೆ ದಿನ ವಿಡೀ – ವರ್ಷಪೂರ್ತಿ ವ್ಯಾಪಾರ ಮಾಡುತ್ತಾನೆ. ಆದರೆ, ಒಬ್ಬ ರೈತ ಮಾತ್ರ ಜನ್ಮತಃ ಕೃಷಿ ಮಾಡು ತ್ತಿರುವುದರಿಂದ ಹಿಡಿದು, ಎಪಿಎಂಸಿ ಬರುವ ಮೊದಲು ಮತ್ತು ನಂತರವೂ ಕೂಡ, ತಾನು ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗದಂತಹ ಮತ್ತು ಖರೀದಿದಾರರು ಕೇಳಿದ ಬೆಲೆಗೆ ಮಾರಾಟ ಮಾಡಿ ಬರುವ ಪರಿಸ್ಥಿತಿಯಲ್ಲಿದ್ದಾನೆ. ಅನಾದಿ ಕಾಲದಿಂದಲೂ
ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ
ಸೇನಾ ಹಿನ್ನೆಲೆ, ಹಿಂದೂ ಧರ್ಮದ ಅನುಯಾಯಿ, ಭಗವದ್ಗೀತೆಯಿಂದ ಸದಾ ಪ್ರೇರಣೆ ಹೊಂದುತ್ತ, ಚಿಕ್ಕ ವಯಸ್ಸಿನಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಅಪ್ರತಿಮ ಸಾಧಕಿ, ಪ್ರಸ್ತುತ ವಿಶ್ವದಲ್ಲಿಯೇ ಬಹುಸೂಕ್ಷ್ಮ ಪದವಿಯೊಂದರ ಮುಖ್ಯಸ್ಥೆಯಾಗಿ ಚುಕ್ಕಾಣಿ ಹಿಡಿದಿದ್ದಾರೆ! ಹೌದು, ನಾನು ಅಮೆರಿಕದ ಸೇನೆ ಸೇರುವಾಗ ಯಾರೂ ನೀನು ಯಾವ ಧರ್ಮದವಳು ಎಂದು ಕೇಳಲಿಲ್ಲ. ಈಗ, ನನ್ನ ಹೆಮ್ಮೆಯ ಜನರನ್ನು ಪ್ರತಿನಿಧಿಸುತ್ತಿದ್ದೇನೆ. ಈಗ ಅದೇಕೆ ಅಳತೆಗೋಲಾಗಬೇಕು? ಎಂದು ದಿಟ್ಟವಾಗಿ ಪ್ರಶ್ನಿಸಿದ್ದಳು ತುಳಸಿ. ಯಾಕೆಂದರೆ, ಈಕೆ ಹಿಂದೂ – ಸನಾತನ ಧರ್ಮ ಅನುಸರಿಸುತ್ತಿದ್ದಳು. ಹೌದು, ತಂದೆ
ಕರಾವಳಿ ಸಮಸ್ಯೆ ತಿಳಿಯದ ಅಧಿಕಾರಿಗಳಿಂದ ಜನ ಹೈರಾಣು !
ರಾಜ್ಯದಲ್ಲಿ ಇಪ್ಪತ್ತೊಂದು ಲಕ್ಷ ಸ್ವತ್ತುಗಳು ಅಧಿಕೃತ ಖಾತೆ ಹೊಂದಿದ್ದರೆ, 32 ಲಕ್ಷಕ್ಕೂ ಹೆಚ್ಚು ಅನಧಿಕೃತ ಸ್ವತ್ತುಗಳು ಅಧಿಕೃತ ಖಾತೆಗಳಾಗಲು ಕಾದುಕುಳಿತಿವೆ. ಹೀಗೆ ಅಳಿದುಳಿದಿರುವ ಎಲ್ಲ ಸ್ವತ್ತುಗಳಿಗೆ ಅಧಿಕೃತ ನೋಂದಣಿ ಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರ ಘೋಷಿಸಿರುವುದು, ಬಜೆಟ್ ಪೂರ್ವ ಮತ್ತು ನಿಗದಿತ ಅವಧಿಯೊಳಗೆ ಕಂದಾಯ ಸೇರಿ ವಿವಿಧ ಮೂಲಗಳಿಂದ ಆದಾಯ ಹೊಂದಿಸಲು ಮಾಡುತ್ತಿರುವ (ಒಳಿತೋ, ಕೆಡುಕೋ ತಿಳಿಯದಂತಹ ಭವಿಷ್ಯತ್ತಿನ ಪ್ರಶ್ನೆ ಇದರಲ್ಲಿದೆ!) ಮತ್ತೊಂದು ಬಗೆಯ ‘ಯೋಜನೆ’ ಇದಾಗಿದೆ. ಇದರಿಂದ ಸುಮಾರು 4 ಸಾವಿರ ಕೋಟಿಯಷ್ಟು ಆದಾಯ
ಮಂಡಳಿಯ ಚಿತ್ತ ಕೊಳಗೇರಿ ನಿರ್ಮೂಲನೆಯೋ, ಅಭಿವೃದ್ದಿಯೋ ?
ಹತ್ತಾರು ದಶಕಗಳು ಕಳೆದರೂ, ಕೊಳಗೇರಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವ ಮಾಹಿತಿ ಕೊಡುವುದು ಮಂಡಳಿಯ ಕೆಲಸವೆಂಬಂತೆ ಕಾಣಬರುತ್ತಿದೆ. ರಾಜ್ಯಾದ್ಯಂತ ಮಂಡಳಿಯ ಕ್ರಿಯಾಯೋಜನೆಯಾಗಲಿ, ತ್ವರಿತಗತಿಯ ಬದಲಾವಣೆಯ ಅಭಿವೃದ್ಧಿಗಳಾಗಲಿ ಎಲ್ಲಿಯೂ ಕಂಡುಬಾರದಿರುವುದರಿಂದ, ಜನಸಾಮಾನ್ಯರು ಈ ಮಂಡಳಿಯ ನಾಮಫಲಕದಲ್ಲಿರುವಂತೆ, ಇದು ಕೊಳಗೇರಿಯನ್ನು ನಿರ್ಮೂಲನೆಗೊಳಿಸುವುದಕ್ಕೆ ಇರುವುದೋ ಅಥವಾ ಕೊಳಗೇರಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೋ ಎಂದು ಅನುಮಾನ ವ್ಯಕ್ತಪಡಿಸುವ ಕಾಲ ಬಂದಿದೆ. ಸ್ಲಂ ಎನ್ನುವ ಕಲ್ಪನೆ ಮೊದಲು ಆರಂಭವಾಗಿದ್ದು ಲಂಡನ್ ನಗರದಲ್ಲಿ! ಹೌದು, ಇಡೀ ಜಗತ್ತಿನಲ್ಲಿ ನಾವೇ ಶ್ರೇಷ್ಠರು, ಇತರರನ್ನು ಆಳಲು ಹುಟ್ಟಿಕೊಂಡವರು, ನಾವು ಬಿಳಿಯರು,
ಗ್ಯಾರಂಟಿ ಭರಾಟೆಯಲ್ಲಿ ಗ್ರಾಮಾಡಳಿತ ಮರೆತ ಸರಕಾರ
ಯಾವುದೇ ಸರಕಾರವಾಗಿರಲಿ ತಳಹಂತದಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ನಡೆಯುತ್ತಿದೆ ಮತ್ತು ಸರಕಾರದ ಯೋಜನೆ ಸಾರ್ವಜನಿಕರ ಆಶೋತ್ತರಗಳಿಗೆ ತಳಮಟ್ಟದ ಅಧಿಕಾರಿಗಳ ಸ್ಪಂದನೆ ಹೇಗಿರಲಿದೆ ಎಂಬುದನ್ನು ಸ್ಪಷ್ಟವಾಗಿ ಅರಿತು ಅದರಂತೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಕೆಲಸವನ್ನು ಸರಕಾರ ಮಾಡಲೇಬೇಕಾಗುತ್ತದೆ. ಇಲ್ಲವಾದರೆ ಗ್ರಾಮ ಲೆಕ್ಕಿಗರು/ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ಎದುರಾಗಿರುವ ಸಮಸ್ಯೆ ಇಷ್ಟು ತೀವ್ರವಾಗುತ್ತಿರಲಿಲ್ಲ. ಕನಿಷ್ಠ ಸೌಲಭ್ಯವು ಇಲ್ಲದೆ ಕೆಳಹಂತದ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಅತಿಕಷ್ಟ. ಯೋಜನೆಗೆ, ಉಚಿತ ಘೋಷಣೆಗಳ ಅನುಷ್ಠಾನಕ್ಕಾದರೂ
ಗುರುತ್ವಾಕರ್ಷಣೆಯೂ, ಕುಂಭಮೇಳವೂ ಮತ್ತು ಆಧುನಿಕ ವಿಜ್ಞಾನ !
ಒಂದಾನೊಂದು ಕಾಲದಲ್ಲಿ ಇಡೀ ಜಗತ್ತಿಗೆ ಜ್ಞಾನದ ದೀವಿಗೆಯನ್ನು ಹಂಚಿದ್ದು ನಮ್ಮ ಭಾರತ ದೇಶ. ಹೌದು, ಇಂದು ನಾವೆಲ್ಲ ಭಾರತ ದೇಶದಲ್ಲಿ ನಮ್ಮ ಹಿಂದಿನ ಹಿರಿಮೆ-ಗರಿಮೆಯನ್ನು ಮರೆತು ಬದುಕುತ್ತಿದ್ದೇವೆ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಆಧುನಿಕ ಬದುಕಿನ ಯಾವುದೋ ಧಾವಂತದಲ್ಲಿ ಓಡುತ್ತಿದ್ದೇವೆ ಮತ್ತು ಧಾರ್ಮಿಕತೆ, ಗೃಹಕೃತ್ಯ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ತಂದೆತಾಯಿಗಳಾಗಿ ನಾವು ಸೋಲುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಇತರೆ ಜನರು ತಮ್ಮ ಧರ್ಮದ ಆಚರಣೆಗಳನ್ನು ನಿರಂತರಗೊಳಿಸುತ್ತ ಸಾಗುತ್ತಿದ್ದರು. ಜನವರಿ 2010ರಲ್ಲಿ ಇರಾಕ್ನ ಕರ್ಬಾಲಾದಲ್ಲಿ ಸುಮಾರು 1 ಕೋಟಿಯಷ್ಟು ಜನರು
