Blog
Your blog category
ಆಟಿಸಂ ಲೋಕದೊಳಗೊಂದು ಮೌನ ಪಯಣ !
ಆಟಿಸಂನ ಚರಿತ್ರೆ ನೋಡುವುದಾದರೆ, ಮೇರಿ ಟೆಂಪಲ್ ಗ್ರ್ಯಾಂಡಿನ್ ತಡವಾಗಿ ಮಾತನಾಡಲು ಪ್ರಾರಂಭಿ ಸಿದರು, ಆದರೆ ಅವರು ವಿಶ್ವದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು. ಅವರು ಹೇಳಿದ ಮಾತು ನಾನು ಪದಗಳಲ್ಲಿ ಯೋಚಿಸುವುದಿಲ್ಲ, ನಾನು ಚಿತ್ರಗಳಲ್ಲಿ ಯೋಚಿಸುತ್ತೇನೆ. ಇದು ಮೌನದೊಳಗಿನ ಪ್ರತಿಭೆಯ ಸಾಕ್ಷಿ. ಒಂದು ಮೌನ ಇರುತ್ತದೆ. ಅದು ಶಬ್ದವಿಲ್ಲದ ಮೌನ ಅಲ್ಲ, ಅದರೊಳಗೆ ಸಾವಿರಾರು ಶಬ್ದಗಳು ಅಡಗಿರುತ್ತವೆ. ನಾವು ಕೇಳುವುದಿಲ್ಲ, ಅವರು ಹೇಳುವುದಿಲ್ಲ. ಅದರ ಮಧ್ಯೆ ಹುಟ್ಟುವುದೇ ಅಂತರ. ಆ ಅಂತರದ ಹೆಸರು Autism Spectrum Disorder (ASD).
ಪರ್ಷಿಯಾದಿಂದ ಇರಾನ್: ತೈಲ, ರಾಜಕೀಯ ಮತ್ತು ಶಕ್ತಿಯ ಪಯಣ
ಒಂಟೆ ವ್ಯಾಪಾರ, ಖರ್ಜೂರ ಕೃಷಿ, ಸಣ್ಣ ಪ್ರಮಾಣದ ವ್ಯಾಪಾರ ಸೇರಿದಂತೆ ಇತರೆ ಸಣ್ಣ ಆದಾಯ ಮೂಲಗಳೇ ಬದುಕಿನ ಆಧಾರವಾಗಿದ್ದವು. ಮರುಭೂಮಿ ಜೀವನ, ನೀರಿನ ಕೊರತೆ, ಆರೋಗ್ಯ ಮತ್ತು ಶಿಕ್ಷಣ ಇಲ್ಲದಂತಿತ್ತು. ರಾಜಾ ಇಬ್ನ್ ಸೌದ್ ಕಾಲದಲ್ಲಿ ರಾಷ್ಟ್ರ ಏಕೀಕರಣ ನಡೆದರೂ ಹಣದ ಕೊರತೆ ತೀವ್ರವಾಗಿತ್ತು. ಅಬುಧಾಬಿಯಲ್ಲಿ 1958ರಲ್ಲಿ ತೈಲ ಕಂಡು ಬಂದಿತು, 1962ರಲ್ಲಿ ರಫ್ತು ಆರಂಭ ಗೊಂಡಿತು. ತೈಲ ದೊರಕುವ ಪೂರ್ವದಲ್ಲಿ ಮಧ್ಯ ಪೂರ್ವದ ತೈಲ ರಾಷ್ಟ್ರಗಳು ಸಂಪೂರ್ಣ ವಿಭಿನ್ನ ಸಾಮಾ ಜಿಕ, ಆರ್ಥಿಕ ವಾಸ್ತವಿಕತೆಯಲ್ಲಿ ಬದುಕುತ್ತಿದ್ದರು.
ಲೆಕ್ಕ ಪರಿಶೋಧಕ ಸಿಎಜಿ: ಜನರ ಹಣದ ಮೌನ ಕಾವಲುಗಾರ !
ಪ್ರಜಾಪ್ರಭುತ್ವ ಎಂದರೆ ಕೇವಲ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಮಾತ್ರವಲ್ಲ; ಅದು ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಕೂಡ ಹೌದು. ವಿಶೇಷವಾಗಿ, ಸರ್ಕಾರವು ಹಣವನ್ನು ಹೇಗೆ ಬಳಸುತ್ತದೆ ಎಂಬುದನ್ನು ಪ್ರಶ್ನಿಸುವ ಹಕ್ಕು- ಇದೇ ಪ್ರಜಾಪ್ರಭುತ್ವದ ಮೂಲಭೂತ ತತ್ವ. ಆದರೆ ಆಡಳಿತದ ಪ್ರಕ್ರಿಯೆಯಲ್ಲಿ ಈ ಸತ್ಯವು ಮಸುಕಾಗುತ್ತದೆ. ತೆರಿಗೆ ರೂಪದಲ್ಲಿ ಸಂಗ್ರಹಿಸಲ್ಪಟ್ಟ ಹಣ, ಸರ್ಕಾರದ ಯೋಜನೆಗಳ ಮೂಲಕ ರ್ಚಾಗುತ್ತದೆ. ಆದರೆ ಈ ಹಣದ ಹಾದಿಯನ್ನು ಯಾರು ಗಮನಿಸುತ್ತಾರೆ? ಈ ಹಣ ನಿಜವಾಗಿಯೂ ಜನರಿಗೆ ತಲುಪುತ್ತಿದೆಯೇ ಎಂಬುದನ್ನು ಯಾರು ಪರಿಶೀಲಿಸು ತ್ತಾರೆ?
ಅಗ್ನಿವೀರರಿಗೆ ಸಿಕ್ಕ ಕಾಯಕಲ್ಪ ಎನ್ʼಸಿಸಿಗೂ ವಿಸ್ತರಿಸಬೇಕಿದೆ !
ಹೊಸ ಉನ್ನತಮಟ್ಟದ ಪಾಲಿಸಿಯನ್ನು ಪರಿಚಯಿಸುವ ಮೂಲಕ ಮಹತ್ತರ ಸುಧಾರಣೆ ತರುವ ಅಗತ್ಯ ಈ ವಿಭಾಗಕ್ಕಿದೆ. ನ್ಯಾಷನಲ್ ಯೂಥ್ ಸರ್ವೀಸ್ ಫ್ರೇಮ್ವರ್ಕ್ ಅಡಿಯಲ್ಲಿ ಎನ್ಸಿಸಿ ಯನ್ನು ಸೆಮಿ-ಕಂಪಲ್ಸರಿ ಮಾಡುವುದು, ಎಜುಕೇಷನ್ ಇಂಟಿಗ್ರೇಷನ್ ಮೂಲಕ ಎನ್ʼಸಿಸಿ ಯನ್ನು ಅಕಾಡೆಮಿಕ್ ಕ್ರೆಡಿಟ್ಸ್ (ಎನ್ಇಪಿಗೆ ಹೊಂದಿಕೊಂಡಂತೆ)ಗೆ ಜೊತೆಗೂಡಿಸಿ ಬೆಳೆಸಬಹುದಾಗಿದೆ. ಭಾರತದ ಯುವಜನತೆ ದೇಶದ ಬಲವಾದ ಶಕ್ತಿ. ಈ ಯುವಕರನ್ನು ಶಿಸ್ತಿನ, ನಾಯಕತ್ವದ ಮತ್ತು ದೇಶಭಕ್ತಿಯ ಮಾರ್ಗದಲ್ಲಿ ನಡೆಸುವ ಅತ್ಯಂತ ಪ್ರಮುಖ ಸಂಸ್ಥೆ ಎಂದರೆ NCC (National Cadet Corps) ರಾಷ್ಟ್ರೀಯ ವಿದ್ಯಾರ್ಥಿ ಸೇನೆ.
ಯುಡಿಐಡಿ: ದಿವ್ಯಾಂಗರ ಗುರುತೋ? ಗೌರವವೋ ?
ಯುಡಿಐಡಿ ಯೋಜನೆಯ ಹಿನ್ನೆಲೆ ಗಮನಿಸಿದಾಗ, ಹಿಂದೆ ಭಾರತದಲ್ಲಿ ವಿಶೇಷಚೇತನರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿತ್ತು. ಒಂದೇ ವ್ಯಕ್ತಿಗೆ ಹಲವು ಪ್ರಮಾಣಪತ್ರಗಳು, ಸೇವೆಗಳ ದುರುಪಯೋಗ, ನಿಖರ ಡೇಟಾ ಲಭ್ಯವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಕೊರತೆ ಮುಂತಾದ ಈ ಸಮಸ್ಯೆಗಳನ್ನು ನಿವಾರಿಸಲು, ಭಾರತ ಸರ್ಕಾರವು ಯುಡಿಐಡಿ ಯೋಜನೆಯನ್ನು ಆರಂಭಿಸಿತು. ಹಿಂದೆ ಭಾರತದಲ್ಲಿ ವಿಶೇಷಚೇತನರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿದ್ದವು. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿತ್ತು. ಒಂದೇ ವ್ಯಕ್ತಿಗೆ
ವಿಳಿಂಜಂ ಬಂದರು: ಭಾರತದ ನವ ಸಾಗರ ಶಕ್ತಿ
ಇದೊಂದು ಭಾರತದ ಸಾಗರ ವಲಯದಲ್ಲಿ ಇತಿಹಾಸದ ಹೊಸ ಅಧ್ಯಾಯ ಎನ್ನಬಹುದು. ಪೋರ್ಟ್ ಆಫ್ ಸಿಂಗಪೂರ್, ಕೊಲಂಬೋ, ದುಬೈ(ಜೆಬೆಲ ಅಲಿ), ರೋಟೆರ್ಡಾಮ್ ವಿಶ್ವದಲ್ಲಿ ಕೆಲವು ಪ್ರಮುಖ ಟ್ರಾನ್ಸ್ಶಿಪ್ಮೆಂಟ್ ಹಬ್ಗಳಾಗಿ ಗುರುತಿಸಿಕೊಂಡಿವೆ. ಭಾರತದ ಸಾಗರ ವ್ಯವಹಾರದಲ್ಲಿದ್ದ ದೊಡ್ಡ ಸಮಸ್ಯೆ, ಭಾರತದ ಕಂಟೇನರ್ ಸರಕುಗಳ ಸುಮಾರು 40%-50% ರಷ್ಟು ವಿದೇಶಿ ಬಂದರುಗಳ ಮೂಲಕವೇ ಸಾಗುತ್ತಿತ್ತು. ವಿಳಿಂಜಂ ಪೋರ್ಟ್ ಕೇವಲ ಕೇರಳದ ಯೋಜನೆಯಲ್ಲ, ಇದು ಭಾರತದ ಸಾಗರ ಮಾಲಾ ಯೋಜನೆಯ ಭವಿಷ್ಯದ ಸಂಕೇತ. ಭಾರತ, ಈಗ ಕೇವಲ ಕರಾವಳಿ ಹೊಂದಿದ ದೇಶವಲ್ಲ, ಬದಲಾಗಿ
ಅನ್ನದಿಂದ ಉದ್ಯಮವರೆಗೆ ಹಬ್ಬಿರುವ ಸಿಎಫ್ʼಟಿಆರ್ಐ: ಇದು ಭಾರತದ ಭವಿಷ್ಯ !
ಮೈಸೂರಿನ ಹೆಮ್ಮೆಯ ಸಂಸ್ಥೆಯಾದ ಸಿಎಫ್ʼಟಿಆರ್ಐ ಹಲವಾರು ಸಂಶೋಧನಾ ವಿಭಾಗ ಗಳನ್ನು ಹೊಂದಿದೆ. ಇಲ್ಲಿ ವಿವಿಧ ವಿಶೇಷ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಪ್ರಮುಖ ವಾಗಿ, ಧಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ, ಅಕ್ಕಿ, ಗೋಧಿ, ಜೋಳ, ಸಜ್ಜೆ ಮುಂತಾದ ಧಾನ್ಯಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ಗುಣಮಟ್ಟ ಸುಧಾರಣೆ ಕುರಿತ ಪ್ರಯೋಗಗಳು ನಡೆಯುತ್ತವೆ. ಕರಾವಳಿ, ಮಲೆನಾಡಿನ ಅಡಕೆಹಾಳೆ ತಟ್ಟೆ ದೇಶದಾಚೆಗೆ ಮಾರುಕಟ್ಟೆ ವಿಸ್ತರಿಸಿಕೊಂಡು ದಶಕಗಳೇ ಸಂದಿವೆ. ಅಡಕೆ ಬೆಳೆಗಾರರು ತಮ್ಮ ತೋಟದಲ್ಲಿ ವ್ಯರ್ಥವಾಗುತ್ತಿದ್ದ ಹಾಳೆ ಯನ್ನು ಸಂಗ್ರಹಿಸಿ ಒಂದೇ ಒಂದು ಯಂತ್ರ
ಕರಾವಳಿಯ ಬೇಲೂರು-ಬೈಂದೂರಿನ ಸೇನೇಶ್ವರ ದೇಗುಲ !
ಕರಾವಳಿ ಪ್ರದೇಶದ ದೇವಾಲಯಗಳು ಸಾಮಾನ್ಯವಾಗಿ 8ನೇ ಶತಮಾನದಿಂದ 16ನೇ ಶತಮಾನ ಗಳವರೆಗೆ ನಿರ್ಮಾಣ ವಿಧಾನ ಹಾಗೂ ವಾಸ್ತುಶಿಲ್ಪ ಶಾಸ್ತ್ರೀಯ ಅಂಶಗಳನ್ನು ಹೊಂದಿವೆ. ಇಲ್ಲಿನ ದೇವಾಲಯಗಳ ಸ್ಥಾಪನೆಯು ಪ್ರಾಚೀನದಿಂದ ವಿಜಯನಗರ ಹಾಗೂ ನಂತರದ ಕಾಲಘಟ್ಟದವರೆಗೆ ವ್ಯಾಪಿಸಿರುವುದು ಕಂಡುಬರುತ್ತದೆ. ಕೊರೋನ ಕಾಲಘಟ್ಟವನ್ನು ದಾಟಿದ ಮೇಲೆ, ಪ್ರಪಂಚದಾದ್ಯಂತ ಪ್ರವಾಸೋದ್ಯಮ ಹೆಚ್ಚು ಗರಿಗೆದರಿತು. ತೀರ್ಥಯಾತ್ರೆ ಎಂಬುದು ನಮ್ಮ ಜನರ ಜೀವನದ ಒಂದು ಸಹಜ ಭಾಗವೇ ಆಗಿದೆ. ದೇಶದಲ್ಲಿ ಇದು ಇನ್ನೂ ಹೆಚ್ಚು ಬೆಳೆಯತೊಡಗಿದಾಗ, ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹಾಗೂ ಆಯಾ ಜಿ ಹಾಗೂ ತಾಲ್ಲೂಕು
ಬೆನ್ನುಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದ ವಿನಾಯಕ ರಾವ್
ಬಹುತೇಕ ಜೀವಿಗಳ ಬೆನ್ನುಮೂಳೆಯು ಭೂಮಿಗೆ ಸಮನಾಂತರವಾಗಿ ರಚನೆಯಾಗಿದೆ. ಬೆನ್ನು ಮೂಳೆಯ ವಿಷಯ ಬಂದಾಗ, ವಿನಾಯಕ ರಾವ್ ಅವರ ಬದುಕು ಆಶ್ಚರ್ಯ ಮತ್ತು ಪ್ರೇರಣಾದಾಯಕವಾದದ್ದು. ತಮಗೆ ಬಂದ ಅಪಾಯವನ್ನು ಮೆಟ್ಟಿ ನಿಂತು, ಬದುಕಿ ತೋರಿಸಿ ಇನ್ನೊಬ್ಬರ ಬದುಕಿಗೆ ಆಧಾರವಾಗುತ್ತಿದ್ದಾರೆ. ಉಡುಪಿ ಜಿಲ್ಲೆ ಕನ್ಯಾಡಿಯ ವಿನಾಯಕ ರಾವ್ ಅವರು ಸ್ವತಃ ಬೆನ್ನುಮೂಳೆ ಮುರಿತದ ದೈಹಿಕ ಸಂಕಷ್ಟಗಳ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಬೇರೆಯವರು ಇಂತಹ ಸಮಸ್ಯೆಗಳಿಂದ ತೊದರೆ ಅನುಭವಿಸಬಾರದೆಂದು ತಮ್ಮ ಸೇವಾಧಾಮ ಸಂಸ್ಥೆಯ ಮೂಲಕ ಕೈಲಾದ ಸೇವೆಯನ್ನು ಮಾಡುತ್ತ ಬರುತ್ತಿದ್ದಾರೆ. ವಿನಾಯಕರಾವ್ ಅವರ
ಸಮಾಜದಲ್ಲಿ ಬದಲಾಗುತ್ತಿದೆ ಉಳಿತಾಯದ ಪರಿಭಾಷೆ !
ಉಳಿತಾಯದ ಪರಿಭಾಷೆ ಬಗ್ಗೆ ಹೇಳುವುದಾದರೆ, ಯಾರು ಎಷ್ಟು ಉಳಿಸಬೇಕು? ತಿಂಗಳಿಗಾಗುವಷ್ಟಾ ಅಥವಾ ಮೂರು ತಲೆಮಾರುಗಳಿಗೆ ಆಗುವಷ್ಟಾ? ಎಂದೆಲ್ಲ ಪ್ರಶ್ನೆ ಬರುತ್ತದೆ. ಖಾಸಗಿ ಉಳಿತಾಯಗಳು ಸುರಕ್ಷಿತವಾ? ಸರಕಾರಿ ಉಳಿತಾಯ ಯೋಜನೆಗಳು ಕೈಹಿಡಿಯುತ್ತವಾ? ಎಂದೆಲ್ಲ ಅನುಮಾನಗಳಿರುತ್ತವೆ. ಭಾರತೀಯರು ಒಡವೆಗಳ ಮೂಲಕ ಚಿನ್ನ ಉಳಿಸುವುದರಲ್ಲಿ ಸಿದ್ಧಹಸ್ತರು. ಅವಕಾಶ, ಹೂಡಿಕೆಗಳ ವ್ಯಾಪ್ತಿ ಬದಲಾದಂತೆ ಷೇರು ಮಾರುಕಟ್ಟೆ, ಬಂಡವಾಳ ಹೂಡಿಕೆಗಳಂಥ ಹೆಚ್ಚುವರಿ ಇರುವ ಕ್ಷೇತ್ರ ಗಳಲ್ಲೂ ಇವರು ಪ್ರವೇಶಿಸುತ್ತಿರುವುದು ವೈಯಕ್ತಿಕ ಮತ್ತು ದೇಶದ ಆರ್ಥಿಕತೆಯ ವಿಚಾರದಲ್ಲಿ ಅಭಿವೃದ್ಧಿ ಸೂಚಕವಾಗಿದೆ. ಹಳ್ಳಿಗಳಿಂದ ನಗರ-ಪಟ್ಟಣಗಳವರೆಗೆ, ಬಡವರಿಂದ ಸಿರಿವಂತರವರೆಗೆ
