ಅನಿವಾಸಿ ಕನ್ನಡಿಗರನ್ನು ತವರು ಮನೆ ಮರೆಯದಿರಲಿ

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ (ಎಐ) ಕ್ಷೇತ್ರಗಳಲ್ಲಿ ಜಾಗತಿಕ ತಜ್ಞರೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಅನಿವಾಸಿ ಕನ್ನಡಿಗರು ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳಿಗೆ ದೇಣಿಗೆ, ಡಿಜಿಟಲ್ ತರಗತಿಗಳ ನಿರ್ಮಾಣ, ವಿದ್ಯಾರ್ಥಿವೇತನಗಳು ಹಾಗೂ ವೈದ್ಯ ಕೀಯ ಶಿಬಿರಗಳು ಮತ್ತು ಆಂಬ್ಯುಲೆನ್ಸ್‌ಗಳ ಒದಗಣೆಯ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಇವರು ನಿರಂತರ ಬೆಂಬಲ ನೀಡುತ್ತಿದ್ದಾರೆ. ಸ್ವಾತಂತ್ರ್ಯಾ ನಂತರದ ಭಾರತದ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ವಿಕಾಸದಲ್ಲಿ ಅನಿವಾಸಿ ಭಾರತೀಯರು ಮತ್ತು ಭಾರತದ ಸಾಗರೋತ್ತರ ನಾಗರಿಕರ ಕೊಡುಗೆ ಅಪಾರವಾದುದು. ಜಾಗತಿಕ

Read More

ಕರ್ನಾಟಕದ ಆರೋಗ್ಯ ಇಲಾಖೆಯ ರೋಗಗ್ರಸ್ತ ಆಂತರ್ಯ

ಆಸ್ಪತ್ರೆಗಳಲ್ಲಿ ದಿನನಿತ್ಯದ ತುರ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಔಷಧಗಳು ಮತ್ತು ಮೂಲಭೂತ ವೈದ್ಯಕೀಯ ಪರಿಕರಗಳ ತೀವ್ರ ಅಭಾವಕ್ಕೆ ಇಲಾಖೆಯೊಳಗಿನ ಆಡಳಿತಾತ್ಮಕ ಮಂದಗತಿಯೇ ಮುನ್ನುಡಿ ಬರೆದಿದೆ. ಔಷಧಗಳ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗುವ ಮುನ್ನವೇ ಮುನ್ನೆಚ್ಚರಿಕೆ ಯಿಂದ ಕೈಗೊಳ್ಳಬೇಕಾದ ಟೆಂಡರ್ ಪ್ರಕ್ರಿಯೆಗಳು ತಿಂಗಳುಗಟ್ಟಲೆ ಕೆಂಪು ಪಟ್ಟಿಯ ಸಿಲುಕಿ ನನೆಗುದಿಗೆ ಬೀಳುತ್ತಿವೆ. ಯಾವುದೇ ಒಂದು ರಾಜ್ಯದ ಯಶಸ್ಸನ್ನು ಅಳೆಯುವುದು ಅಲ್ಲಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಿಗುವ ಉಚಿತ ಹಾಗೂ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಸೇವೆಯ ಆಧಾರದ ಮೇಲೆ. ಆದರೆ ಪ್ರಸ್ತುತ

Read More

ದೆಹಲಿ ದೌಡು ಮತ್ತು ಆಡಳಿತದ ತಡೆಗೋಡೆ

ಕೇವಲ ರಾಜ್ಯ ನಾಯಕರು ದೆಹಲಿಗೆ ಹೋಗುವುದಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಅಸಮಾಧಾನಿತ ಶಾಸಕರನ್ನು ಶಾಂತಗೊಳಿಸಲು ಹಲವು ಬಾರಿ ಬೆಂಗಳೂರಿಗೆ ಧಾವಿಸಿ ಬರಬೇಕಾಯಿತು. ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಿ, ಬಹಿರಂಗ ಹೇಳಿಕೆಗಳನ್ನು ನೀಡದಂತೆ ಶಾಸಕರಿಗೆ ಎಚ್ಚರಿಕೆ ನೀಡುವುದು ಮತ್ತು ಸಚಿವರ ಪೋರ್ಟ್ ಫೋಲಿಯೋ ಹಾಗೂ ಸಚಿವ ಸಂಪುಟ ಪುನಾರಚನೆಯ ಭರವಸೆ ನೀಡಿ ತೇಪೆ ಹಚ್ಚುವ ಕೆಲಸವನ್ನು ಈ ಕೇಂದ್ರ ನಾಯಕರು ನಿರಂತರವಾಗಿ ಮಾಡಿದರು. ಕರ್ನಾಟಕದಲ್ಲಿ

Read More

ಸೆಮಿ ಕಂಡಕ್ಟರ್‌ ಚಿಪ್:‌ ಮಾಡದಿರಲಿ ಕರ್ನಾಟಕ ತಪ್ಪು

ಸೆಮಿಕಂಡಕ್ಟರ್ ಚಿಪ್ಟ್ ಎಂದರೆ ಸರಳವಾಗಿ ಹೇಳಬೇಕೆಂದರೆ, ನಮ್ಮ ಸ್ಮಾರ್ಟ್ʼಫೋನ್‌ಗಳು, ಕಂಪ್ಯೂ ಟರ್‌ಗಳು ಮತ್ತು ಕಾರುಗಳಂತಹ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳ ಮೆದುಳು. ನಮ್ಮ ತಲೆಗೂದಲಿನ ಎಳೆಯಷ್ಟೇ ಸೂಕ್ಷ ವಾಗಿರುವ ಈ ಸಿಲಿಕಾನ್ ತುಣುಕುಗಳು ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಮೂಲಕ ಸಾಧನಗಳು ಹೇಗೆ ಕೆಲಸ ಮಾಡಬೇಕೆಂದು ನಿರ್ಧರಿಸುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್’ಫೋನ್ʼಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ, ಬ್ಯಾಟರಿ ಚಾಲಿತ ವಾಹನಗಳು (ಇವಿ), ರಕ್ಷಣೆ ಮತ್ತು ಆಟೋಮೊಬೈಲ್ ವಲಯದವರೆಗೆ ಪ್ರತಿಯೊಂದು ಆಧುನಿಕ ತಂತ್ರಜ್ಞಾನಕ್ಕೂ ಅತ್ಯಗತ್ಯವಾಗಿ ಬೇಕಿರುವುದು ಸೆಮಿಕಂಡಕ್ಟರ್ ಚಿಪ್‌ಗಳು. ಜಾಗತಿಕ

Read More

ಆಯುಷ್‌ ಕ್ರಾಂತಿ: ಆಯುರ್ವೇದಕ್ಕೂ ಇದೆ ಆರೋಗ್ಯವಿಮೆ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಜಾರಿಗೆ ತಂದಿರುವ ಐತಿಹಾಸಿಕ ನಿಯಮಾವಳಿಗಳ ಪ್ರಕಾರ, ಏಪ್ರಿಲ್ 1, 2024ರಿಂದ ಜಾರಿಗೆ ಬರುವಂತೆ ಎಲ್ಲಾ ಆರೋಗ್ಯ ವಿಮೆಗಳಲ್ಲಿ ಸಾಂಪ್ರದಾಯಿಕ ಆಯುಷ್ (ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಚಿಕಿತ್ಸೆಗಳನ್ನು ಅಲೋಪತಿ ಚಿಕಿತ್ಸೆಗಳಿಗೆ ಸಮಾನವಾಗಿ ಪರಿಗಣಿಸುವುದು ಕಡ್ಡಾಯವಾಗಿದೆ. ಆರೋಗ್ಯ ವಿಮೆಯ ಬೆಂಬಲದಿಂದ ಆಯುರ್ವೇದ ಚಿಕಿತ್ಸೆ ಹೆಚ್ಚಿನ ಜನರಿಗೆ ಕೈಗೆಟುಕು ವಂತಾಗುತ್ತಿದೆ. ಪರಿಣಾಮವಾಗಿ ಆಯುರ್ವೇದ ಆಸ್ಪತ್ರೆಗಳು, ಪಂಚಕರ್ಮ ಕೇಂದ್ರಗಳು, ಯೋಗ ಮತ್ತು ವೆಲ್‌ನೆಸ್ ಸಂಸ್ಥೆಗಳು, ಔಷಧ

Read More

ಬೊಕ್ಕಸ ಬರಿದಾಗಿದ್ದಕ್ಕೆ ಪ್ರಗತಿಯ ಅಡಿಗಲ್ಲೇ ಮಾರಾಟ !

ಒಂದು ರಾಜ್ಯ ಸುಭಿಕ್ಷವಾದ ಬಂಗಲೆಯಾಗಿದ್ದರೆ ಮೂಲಭೂತ ಅಭಿವೃದ್ಧಿ ಆ ಮನೆಯ ಅಡಿಗಲ್ಲು ಎನ್ನಬಹುದು. ಪ್ರತಿ ಸರಕಾರ ಅಧಿಕಾರಕ್ಕೆ ಬಂದಾಗ ತನ್ನದೇ ಆದ ಒಂದು ಮನೆಯ ಪರಿಕಲ್ಪನೆ ಯೊಂದಿಗೆ ಬಂದಿರುತ್ತದೆ. ಈ ಕಾಂಗ್ರೆಸ್ ಸರಕಾರವು ಹೀಗೆಯೇ ಅಧಿಕಾರಕ್ಕೆ ಬಂದಿತ್ತು. ಆದರೆ ಅದರ ಆಡಳಿತದ ವೈಖರಿ ಹೇಗಿದೆ ಎಂದರೆ ಇಂದು ರಾಜ್ಯದ ಭವಿಷ್ಯಕ್ಕೆ ಆಧಾರವಾಗಬೇಕಿದ್ದ ಮೂಲಸೌಕರ್ಯ ಅಭಿವೃದ್ಧಿಯ ‘ಅಡಿಗಲ್ಲ’ನ್ನೇ ಮಾರಾಟಕ್ಕಿಟ್ಟು ಬರಿಗೈಲಿ ನಿಲ್ಲುವ ದುಃಸ್ಥಿತಿಗೆ ಬಂದು ತಲುಪಿದ್ದಾರೆ. ಒಂದು ರಾಜ್ಯ ಸುಭಿಕ್ಷವಾದ ಬಂಗಲೆಯಾಗಿದ್ದರೆ ಮೂಲಭೂತ ಅಭಿವೃದ್ಧಿ ಆ ಮನೆಯ ಅಡಿಗಲ್ಲು

Read More

ಗ್ಯಾರಂಟಿ: ಮನೆಯ ಮೇಲ್ಛಾವಣಿ ಮಾರಿ ಹಬ್ಬದ ಊಟ ಮಾಡಿದಂತೆ !

ಕರ್ನಾಟಕದ ವಾರ್ಷಿಕ ಸಾಲದ ಪ್ರಮಾಣವು ಇತಿಹಾಸದ ಮೊದಲ ಬಾರಿಗೆ ರೂ.1.32 ಲಕ್ಷ ಕೋಟಿ ದಾಟುವ ಅಂದಾಜಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯು ಬರೋಬ್ಬರಿ ಋೂ.8.24 ಲಕ್ಷ ಕೋಟಿ ತಲುಪು ತ್ತಿರುವುದು ಕೇವಲ ಅಂಕಿ-ಅಂಶವಲ್ಲ; ಇದು ಪ್ರತಿ ಕನ್ನಡಿಗನ ತಲೆಯ ಮೇಲೆ ಹೊರಿಸುತ್ತಿರುವ ಬೆಟ್ಟದಷ್ಟು ಸಾಲದ ಹೊರೆ. ಗ್ಯಾರಂಟಿ ಯೋಜನೆಗಳು ಅಥವಾ ಕಲ್ಯಾಣ ಕಾರ್ಯಕ್ರಮಗಳು ಮೂಲಭೂತವಾಗಿ ಕೆಟ್ಟದ್ದಲ್ಲ. ವಾಸ್ತವವಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಇವು ಪೂರಕ ವಾಗಿರುತ್ತವೆ. ಆದರೆ, ಇಂತಹ ಯೋಜನೆಗಳ ಯಶಸ್ಸು ಅವುಗಳನ್ನು ಜಾರಿಗೆ ತರುವ

Read More

ಪಶ್ಚಿಮ ಬಂಗಾಳದಲ್ಲಿ ಪುಟಿದೆದ್ದ ಪ್ರಚಂಡಶಕ್ತಿ ಭಾರತೀಯ ಜನತಾ ಪಕ್ಷ !

ಸ್ವಾತಂತ್ರ್ಯಾನಂತರ ಇಲ್ಲಿ ಕಮ್ಯುನಿಸ್ಟ್ ಚಳವಳಿ ಬಲವಾಗಿ ಬೆಳೆಯಿತು. ಸುಮಾರು 34 ವರ್ಷ ಗಳ ಕಾಲ ಕಮ್ಯುನಿ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿ) ನೇತೃತ್ವದ ಎಡಪಂಥೀಯ ಸರಕಾರ ಅಧಿಕಾರದಲ್ಲಿತ್ತು. ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ರಾಜ್ಯದ ರಾಜಕೀಯದ ಕೇಂದ್ರಬಿಂದುವಾಯಿತು. ಈ ಹಿನ್ನೆಲೆಯ ಬಿಜೆಪಿ ಬಂಗಾಳ‌ ದಲ್ಲಿ ಬೆಳೆಯುವುದು ಅನೇಕರಿಗೆ ಅಸಾಧ್ಯವೆನಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ ವಿಕಸನವೂ ಭಾರತದ ರಾಜಕೀಯದ ಅತ್ಯಂತ ಮಹತ್ವದ ಅಧ್ಯಾಯಗಳಲ್ಲಿ ಒಂದಾಗಿದೆ. ದಶಕಗಳ ಕಾಲ ಎಡಪಂಥೀಯ ಹಾಗೂ

Read More

ಆಧುನಿಕ ಕರ್ನಾಟಕದ ರಾಜಾಹುಲಿಯ ದೂರದೃಷ್ಟಿಯ ನಾಯಕತ್ವ

ಜನಸಾಮಾನ್ಯರ ಪಾಲಿಗೆ ದಾರಿದೀಪದಂತಿರುವ ಯಡಿಯೂರಪ್ಪನವರು ಅನೇಕರಿಗೆ ಮಾರ್ಗದರ್ಶಕ ರಾಗಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ನಿಕಟ ಸಂಪರ್ಕ ಹೊಂದಿದ್ದು, ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಬರುವುದರಿಂದ ಈ ಭಾಗದ ಜನರೊಂದಿಗೆ ಅವರಿಗೆ ಮತ್ತು ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಒಂದು ಅವಿನಾಭಾವ ಸಂಬಂಧವಿದೆ. ಒಂದು ಕಾಲದಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬೈಂದೂರು ಕ್ಷೇತ್ರವು, ಇಂದು ಇವರ ದೂರದೃಷ್ಟಿಯಿಂದ ಹಲವು ಅಭಿವೃದ್ಧಿ ಯೋಜನೆಗಳನ್ನು ಪಡೆದಿದೆ. ಐದು ದಶಕಗಳಿಂದ ಕರ್ನಾಟಕದ ರಾಜಕೀಯ ಒಬ್ಬರು ನಾಯಕರ ಜೊತೆ ಅವಿನಾಭಾವವಾಗಿ ಬೆಸೆದುಕೊಂಡಿದೆ ಎಂದರೆ

Read More

ಸಾಂಸ್ಥಿಕ ಸೋಗಿನಲ್ಲಿ ಸಂಘಟಿತ ಮತಾಂತರ

ಮಹಾರಾಷ್ಟ್ರದ ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಇಎಸ್) ನಂತಹ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಯ ಆವರಣದಲ್ಲಿ ನಡೆದಿದೆ ಎನ್ನಲಾದ ಬಲವಂತದ ಮತಾಂತರ ಮತ್ತು ಕಿರುಕುಳದ ಘಟನೆಗಳು ಕೇವಲ ಒಂದು ಅಪರಾಧವಲ್ಲ, ಇದು ನಮ್ಮ ದೇಶದ ಆಂತರಿಕ ಭದ್ರತೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಎದುರಾಗಿರುವ ದೊಡ್ಡ ಸವಾಲು. ಭಾರತವು ಇಂದು ಜಾಗತಿಕವಾಗಿ ‘ವಿಶ್ವಗುರು’ ಆಗುವತ್ತ ದಾಪುಗಾಲು ಹಾಕುತ್ತಿದೆ. ತಂತ್ರಜ್ಞಾನ, ಆರ್ಥಿಕತೆ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ನಾವು ಮುಂಚೂಣಿ ಯಲ್ಲಿದ್ದೇವೆ. ಆದರೆ, ಇಷ್ಟೆಲ್ಲಾ ಪ್ರಗತಿಯ ನಡುವೆಯೂ ನಮ್ಮ ಸಮಾಜದ ಆಳದಲ್ಲಿ ಅತ್ಯಂತ

Read More