Blog
Your blog category
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ಗಳಿವೆ ಎಂದು ನಿಮಗೆ ಗೊತ್ತೆ ?
ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಕೇಂದ್ರ ಸರಕಾರದ ‘ಸಂಚಾರಸಾಥಿ’ ವೆಬ್ಸೈಟ್ ನಲ್ಲಿ ಹಾಕಿದರೆ, ನಿಮ್ಮ ಹೆಸರಿನಲ್ಲಿ ಖರೀದಿಸಿರುವ ಒಟ್ಟು ಸಿಮ್ಗಳ ಅಧಿಕೃತ ಮಾಹಿತಿ ಪಡೆಯ ಬಹುದಾಗಿದೆ. ನಿಮಗೆ ಮಾಹಿತಿ ಇಲ್ಲದೆ ಖರೀದಿಸಿದ್ದರೆ, ಅವುಗಳನ್ನು ನೀವು ಬ್ಲಾಕ್ ಸಹ ಮಾಡಬಹುದಾಗಿದೆ. ನಿತ್ಯ ಜೀವನದಲ್ಲಿ ನಾವು ಒಂದಿಂದು ರಾಂಗ್ ನಂಬರ್ನಿಂದ ಫೋನ್ ಕರೆ ಸ್ವೀಕರಿಸುತ್ತಲೇ ಇರು ತ್ತವೆ ಅಥವಾ ಕರೆ ಸ್ವೀಕಾರಕ್ಕೂ ಮೊದಲೇ ಅದು ಕಟ್ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅದು ಜಾಸ್ತಿಯೇ ಆಗಿದೆ. ಹಾಗೆ ನೋಡಿದರೆ ಇದು
ದುಡಿಮೆಯೇ ಘನತೆ ಎಂದು ಸಾರುವ ಕಾಲೇಜು
ವಿಶ್ವಯುದ್ಧದ ನಂತರ ವಿವಿಧ ದೇಶಗಳಲ್ಲಿ ಉಂಟಾದ ಭೀಕರತೆ, ಆಹಾರದ ಕೊರತೆ, ದುಡಿಯುವ ವರ್ಗದ ಅನುಪಸ್ಥಿತಿ ಇತ್ಯಾದಿ ವಿಚಾರಗಳು ಇನ್ನಷ್ಟು ಭಯಾನಕವಾಗುವ ಲಕ್ಷಣಗಳು ಗೋಚರಿಸತೊಡಗಿದವು. ಹೀಗಾಗಿ, ಅಭಿವೃದ್ಧಿ, ಶಿಕ್ಷಣ, ಯುವಜನತೆಗೆ ಅಗತ್ಯವಿರುವ ಕೌಶಲಯುತ ತರಬೇತಿಗಳ ಕುರಿತಂತೆ ಅಂದಿನ ಬ್ರಿಟಿಷ್ ಆಡಳಿತ ಗಂಭೀರವಾಗಿ ಚಿಂತಿಸಿತು. ಅಂತೆಯೇ ಅಂದಿನ ಮದ್ರಾಸು ಬ್ರಿಟಿಷ್ ಸರಕಾರ ಕೂಡ ಭಾರತದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿ ಕೊಂಡಿತು. ಇದರ ಭಾಗವಾಗಿ, ತಾಂತ್ರಿಕ ಶಿಕ್ಷಣವನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ತಲಾ ಒಂದೊಂದು ಪಾಲಿಟೆಕ್ನಿಕ್ಗಳನ್ನು ಆರಂಭಿಸ
ಪಂಚಾಯತ್ ರಾಜ್ ವ್ಯವಸ್ಥೆಯ ಜೀವಾಧಾರಕ
ವಿವಿಧ ಸ್ತರದ ಪಂಚಾಯತಿಗಳು ಉತ್ತಮ ಸಾಧನೆಯನ್ನು ಮೆರೆಯಬೇಕೆಂದರೆ, ಅಲ್ಲಿನ ಜನಪ್ರತಿನಿಧಿಗಳು, ಆಡಳಿತ ವರ್ಗ ಅಷ್ಟೇ ಶ್ರಮದಿಂದ ಮತ್ತು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಉಡುಪಿ ಜಿಲ್ಲಾ ಪಂಚಾಯತಿಯು ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮೊದಲಾದ ವಿಷಯಗಳಲ್ಲಿ ಇದೀಗ ದೇಶಕ್ಕೆ ಮಾದರಿಯಾಗಿದೆ. ಅಧಿಕಾರ ವಿಕೇಂದ್ರಿತ ವ್ಯವಸ್ಥೆಯಲ್ಲಿ ಪಂಚಾಯ ತಿಗಳು ಮುಖ್ಯವಾಗಿರುತ್ತವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೆಲವು ಯೋಜನೆಗಳು ಪಂಚಾಯತಿ ಮೂಲಕವೇ ನೇರವಾಗಿ ಅನುಷ್ಠಾನಕ್ಕೆ ಬರುತ್ತವೆ. ಪಂಚಾಯತ್ ವ್ಯವಸ್ಥೆ ಸದೃಢವಾದಂತೆ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಸದೃಢವಾಗುತ್ತವೆ. ಹಿಂದೆ ಗ್ರಾಮಗಳಲ್ಲಿ ಪಂಚಾಯತಿ
ಓದುವ ಸಂಸ್ಕೃತಿ ಬೆಳೆಸುವ ಗ್ರಂಥಾಲಯಗಳನ್ನು ನಿರ್ಲಕ್ಷಿಸುವುದೇಕೆ ?
ದೇಶದ ಕೊನೆತುದಿಯ ಹಳ್ಳಿಯಲ್ಲಿ ಬದುಕಿಗಾಗಿ ದಿನಪತ್ರಿಕೆಗಳನ್ನು ಹಂಚುತ್ತಿದ್ದ ಹುಡುಗ ಓದಿನಲ್ಲಿ ಮುಂದಿದ್ದ. ಮುಂದೆ ಓದುವ ಹಸಿವಿತ್ತು, ಹಂಬಲವಿತ್ತು, ಜತೆಗೆ ಬಡತನವಿತ್ತು. ಆದರೇನಂತೆ, ವಿದ್ಯಾದೇವಿ ಯಾವತ್ತೂ ತಾರತಮ್ಯ ಮಾಡಳು ಎಂಬಂತೆ, ಆತನ ಆಸಕ್ತಿ ಕಂಡು ಅಯ್ಯರ್ ಗುರುಗಳು ಕೈಹಿಡಿದು ಮಾರ್ಗದರ್ಶನ ತೋರಿ ದರು. ರಾಮೇಶ್ವರದಲ್ಲಿ ಮನೆಮನೆಗೆ ಪೇಪರ್ ಹಾಕುತ್ತಿದ್ದ ಮುಗ್ಧ ಬಾಲಕ ಅಬ್ದುಲ್ ಕಲಾಂ, ದೇಶದ ಸರ್ವೋಚ್ಚ ಪದವಿಯವರೆಗೂ ಬೆಳೆದುಬಂದ. ಇಂಥ ಯೋಗ್ಯತೆ ಸಂಪಾದಿಸಿದ್ದಾದರೂ ಹೇಗೆ ಎಂಬುದನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮುಂದೊಂದು ದಿನ ಮಕ್ಕಳ
ಅಂಚೆ ಇಲಾಖೆ ಫೀನಿಕ್ಸ್ʼನಂತೆ ಪುಟಿಗೆದ್ದದ್ದೇ ರೋಚಕ !
ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ‘ಟ್ರಿಣ್… ಟ್ರಿಣ್ ಅಂಚೆಯಣ್ಣ’ ಅಂತ ಒಂದು ಪಾಠವಿತ್ತು. ಅದನ್ನು ಓದಿದ ಮೇಲೆ ನಾವು ಕೂಡ ಮನೆಯಲ್ಲಿ ಅಂಚೆಯಣ್ಣನ ಆಟವಾಡುತ್ತಿದ್ದ ನೆನಪು ಬರುತ್ತಿದೆ. ಈ ಅಂಚೆಯಣ್ಣ ಯಾರಿಗೆ ಗೊತ್ತಿಲ್ಲ ಹೇಳಿ! ನದಿ, ಕಾಲುವೆ, ಹಳ್ಳಿ, ಗುಡ್ಡಗಾಡು ಪ್ರದೇಶ ಎನ್ನದೆ, ಮಳೆ- ಚಳಿ-ಬಿಸಿಲು ಹೀಗೆ ಎಲ್ಲದಕ್ಕೂ ಮೈಯೊಡ್ಡಿಕೊಂಡು ಬರುವವ. ಖಾಕಿ ಬಟ್ಟೆ ಧರಿಸಿ ಸೈಕಲ್ ಏರಿಕೊಂಡು ಬಂದ ಈತ ‘ಟ್ರಿಣ್ ಟ್ರಿಣ್’ ಸದ್ದಿನೊಂದಿಗೆ ಮನೆಯ ಮುಂದೆನಿಂತನೆಂದರೆ, ದೂರದ ಊರಿಗೆ ದುಡಿಯಲು ಹೋಗಿರುವ ಮಗನ ಪತ್ರ
ಸ್ವಾಭಿಮಾನಿ ಮಾಜಿ ಸೈನಿಕರಿಗೆ ಬದುಕಿನ ಅಭದ್ರತೆ !
ಮಾಜಿ ಸೈನಿಕರು ಸರಕಾರದ ಯಾವೊಂದು ಯೋಜನೆಗೂ ಅರ್ಹತೆ ಪಡೆಯುವುದಿಲ್ಲ. ಬಿಪಿಎಲ್, ಗೃಹಲಕ್ಷ್ಮಿಗಳಂಥ ಯಾವ ಯೋಜನೆಯೂ ಇವರನ್ನು ತಲುಪುವುದಿಲ್ಲ. ಸಮಾಜದ ಒಂದು ಭಾಗವಾಗಿ ದ್ದರೂ, ಇತರರು ಪಡೆವ ಲಾಭಗಳನ್ನು ಪಡೆಯಲೂ ಮಾಜಿ ಸೈನಿಕರು ಹೋರಾಡಬೇಕಾದ ಸ್ಥಿತಿಯಿದೆ. ದೇಶದ ರಕ್ಷಣೆಗೆ ಸಿಂಹಸದೃಶ ಯುವಕರ ಅಗತ್ಯವಿರುವುದರಿಂದ ಪ್ರತಿವರ್ಷವೂ ಸಾವಿರಾರು ಯುವಕರು ಸೇನೆ ಯನ್ನು ಸೇರುತ್ತಿರುತ್ತಾರೆ ಮತ್ತು ಸಾಮಾನ್ಯವಾಗಿ 35 ರಿಂದ 40 ವರ್ಷಕ್ಕೆಲ್ಲ ನಿವೃತ್ತರಾಗುತ್ತಾರೆ. ಈ ನಿವೃತ್ತಿಯ ನಂತರ ಮುಂದೇನು ಎಂಬ ಸವಾಲು ಅವರಿಗೆ ಎದುರಾಗುತ್ತದೆ. ಜನಸಾಮಾನ್ಯರ ಜೀವನದಲ್ಲಿ ಇದು ನಿವೃತ್ತಿಯವಯಸ್ಸಲ್ಲ.
ಬಿಸಿಯೂಟದವರ ಬದುಕನ್ನು ತಣ್ಣಗಾಗಿಸುತ್ತಿರುವ ಗೌರವಧನ !
ಸಂಬಳ ಹೆಚ್ಚಿಸಿ ಎಂದು ಆರೇಳು ವರ್ಷದಿಂದ ಹೋರಾಟ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ತಾಲೂಕು, ಜಿ, ರಾಜ್ಯಮಟ್ಟದಲ್ಲಿ ಹೋರಾಡಿದೆವು. ಸ್ಪಂದನೆ ಶೂನ್ಯವಾಯ್ತು. ಕೇವಲ ನಮ್ಮ ಸಮಯ ಮತ್ತು ಹಣ ವ್ಯರ್ಥವಾಯಿತೇ ವಿನಾ ಯಾವ ಫಲವೂ ದೊರೆಯಲಿಲ್ಲ ಎಂದು ನೊಂದು ನುಡಿಯುತ್ತಿzರೆ ಅಕ್ಷರದಾಸೋಹದ ಅಡುಗೆ ಸಹಾಯಕಿಯರು. ಜನಪ್ರಿಯ ಯೋಜನೆ, ಭಾಗ್ಯಗಳ ಸದ್ದುಗದ್ದಲಗಳ ಇಂದಿನ ದಿನಗಳಿಗಿಂತ, ನಿಜವಾಗಿಯೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ದೇಶದ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾದಂಥ ಯೋಜನೆಗಳನ್ನು ಹಿಂದಿನ ದಿನಮಾನಗಳಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರೆನ್ನಬಹುದು. ಇಂಥವುಗಳಲ್ಲಿ ಅಕ್ಷರ ದಾಸೋಹ- ಮಧ್ಯಾಹ್ನದ
ಕೆರೆಗಳ ಪುನಶ್ಚೇತನವು ದೇವರ ಸೇವೆ ಇದ್ದಂತೆ !
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ನದಿಗಳಿರುವಂತೆ ಸಣ್ಣ-ದೊಡ್ಡ ಕೆರೆಗಳೂ ಹೆಚ್ಚಿವೆ. ಕೃಷಿ ಪಂಪ್ಸೆಟ್ಗಳನ್ನು ಇಡಲಾಗದಷ್ಟು ಸ್ಥಿತಿಗೆ ಕೆಲವು ಕೆರೆಗಳು ತಲುಪಿದ್ದು, ಅಷ್ಟು ಹೂಳು ತುಂಬಿಕೊಂಡಿದೆ. ಕೆಲವೆಡೆ ಕೃಷಿಕರು, ಸ್ಥಳೀಯರೇ ಕೆರೆಯನ್ನು ಸ್ವಚ್ಛಗೊಳಿಸುವುದುಂಟು; ಆದರೆ ನಿರ್ವಹಣೆಯ ಕೊರತೆ. ನಿರ್ವಹಣಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನದಿ, ಸರೋವರ ಹಾಗೂ ಕೆರೆಗಳು ಮನುಷ್ಯನ ನಿತ್ಯದ ಬದುಕು, ಕೃಷಿ, ತೋಟಗಾರಿಕೆಯ ಜೀವಸೆಲೆಗಳು. ನೀರಿನ ಮೂಲಗಳನ್ನುಉಳಿಸಿಕೊಳ್ಳದಿದ್ದರೆ ಭವಿಷ್ಯದ ಪೀಳಿಗೆಗೆ ನಾವೇನೇ ನೀಡಿದರೂ ಅದು ಅರ್ಥಹೀನವಾಗುತ್ತದೆ. ನೀರಿಲ್ಲದೆ ಯಾವ ಸಾಧನೆಯನ್ನೂ ಮಾಡಲಾಗದು. ನೀರಿನ ಮೂಲಗಳನ್ನು
ಶಿಕ್ಷಣ ನೀತಿ ಬೇಕಿರುವುದು ಸರಕಾರಕ್ಕೋ, ವಿದ್ಯಾರ್ಥಿಗಳಿಗೋ?
ಆಧುನಿಕ ಜಗತ್ತಿನಲ್ಲಿ ಗ್ರಾಮ-ಗ್ರಾಮಗಳ, ನಗರ-ನಗರಗಳ ನಡುವಿನ ಪರಸ್ಪರ ಸ್ಪರ್ಧೆಯ ಮನೋಭಾವ ಹೋಗಿ, ದೇಶ-ದೇಶಗಳ ನಡುವೆ ಆರೋಗ್ಯಕರ ಸ್ಪರ್ಧಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಈ ಮೂಲಕ ಇಡೀ ವಿಶ್ವವೇ ಒಂದು ‘ಗ್ಲೋಬಲ್ ವಿಲೇಜ್’ನಂತಾಗಿದೆ. ಹಾಗಾಗಿ, ನಮ್ಮ ಇಂದಿನ ಮಕ್ಕಳು ವಿಶ್ವಮಟ್ಟದಲ್ಲಿ ಬೆಳೆಯಬೇಕಾದ ವಾತಾವರಣ ಸಹಜವಾಗಿಯೇ ನಿರ್ಮಾಣವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಅನುಪಮ ಕೊಡುಗೆಯನ್ನು ನೀಡಬಲ್ಲದು. ಸಿಂಧೂ ನಾಗರಿಕತೆಯ ಕಾಲಘಟ್ಟದಲ್ಲಿ ಭಾರತೀಯ ಗುರುಕುಲ ಪದ್ಧತಿಯ ಶಿಕ್ಷಣ ಕ್ರಮವಿತ್ತು. ಮಾನವನಿಗೆ ಅಕ್ಷರಜ್ಞಾನ ಮತ್ತು ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಪ್ರಭಾವಶಾಲಿಯಾಗಿ
ಗುತ್ತಿಗೆದಾರರ ಸ್ವರ್ಗವಾದ ಎತ್ತಿನಹೊಳೆ ಯೋಜನೆ!
ಜನರು ತಮ್ಮ ಕಷ್ಟ-ಸುಖಗಳನ್ನು ತೊಡೆದು ಸಾಮಾಜಿಕ ಬದುಕಿಗೆ ಒಂದಿಷ್ಟು ಅನುಕೂಲ ಮಾಡಿಕೊಡುತ್ತಾರೆಂಬ ಭರವಸೆಯೊಂದಿಗೆ ಮತ ಹಾಕುವ ಮೂಲಕ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆರಿಸಿ ರಾಜಧಾನಿಗೆ ಕಳುಹಿಸುತ್ತಾರೆ. ಇಂತಹ ಜನಪ್ರತಿನಿಧಿಗಳು, ಜನರ ಸಮಸ್ಯೆಗಳನ್ನು ಕಡಿಮೆ ಮಾಡಬೇಕೆ ಹೊರತು, ಇರುವ ಸಂಪನ್ಮೂಲಗಳನ್ನು ನಾಶಮಾಡುವಂತಹ ಹಾಗೂ ಮತ್ತಷ್ಟು ಸಮಸ್ಯೆಗಳನ್ನು ಹೆಚ್ಚಿಸುವಂತಹ ಕೆಲಸಗಳನ್ನು ಜನಪ್ರತಿನಿಧಿಗಳಾಗಲಿ, ಜನಸೇವೆಗೆಂದು ದೊಡ್ಡ ದೊಡ್ಡ ಹುದ್ದೆ ಸೇರುವ ಅಧಿಕಾರಿಗಳಾಗಲಿ ಮಾಡಬಾರದು. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆಯೆಂದರೆ, ರಾಜ್ಯದ ಪ್ರತಿಷ್ಠಿತ ಯೋಜನೆಯಾದ ಎತ್ತಿನಹೊಳೆ ನೀರಾವರಿ